ಭಾರತ್ ಜೋಡೋ ( BHARTH JODO ) ಯಾತ್ರೆ ಮೂಲಕ ರಾಹುಲ್ ಗಾಂಧಿ ಬಾಡಿ ಫಿಟ್ನೆಸ್ ಪ್ರದರ್ಶನವಾಗುತ್ತಿದೆ. ರಾಹುಲ್ ಗಾಂಧಿಗೆ ಬಾಡಿ ಫಿಟ್ನೆಸ್ ಇದ್ದರೂ ದೇಶವಾಳಲು ಮೈಂಡ್ ಫಿಟ್ನೆಸ್ ಇದ್ಯಾ? ಎಂದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಹಿಜಾಬ್ ಹೋರಾಟದ ಕುರಿತಾಗಿಯೂ ಪ್ರತಿಕ್ರಿಯೆ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ಮುಸ್ಲಿಂ ಹೆಣ್ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕು, ಸ್ವಂತ ಕಾಲಲ್ಲಿ ನಿಲ್ಲಬೇಕು. ಗಂಡಸರು ಹಾಕಿದ ತಾಳಕ್ಕೆ ಕುಣಿದು, ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆಯಬೇಡಿ. ಈಗಲಾದರೂ ಅರ್ಥ ಮಾಡಿಕೊಳ್ಳಿ ಎಂದು ಹಿಜಾಬ್ ಪರ ಹೋರಾಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದ್ರು. ಇದನ್ನೂ ಓದಿ :- ಶಿವಾನಂದ ವೃತ್ತದ ಮೇಲೆ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ‘ಪುನೀತ್ ರಾಜ್ ಕುಮಾರ್’ ಹೆಸರಿಡಿ – ಎನ್.ಆರ್.ರಮೇಶ್
ಮುಸ್ಲಿಂ ( MUSLIM ) ಹೆಣ್ಮಕ್ಕಳು ಈಗಲಾದರೂ ಯೋಚಿಸಬೇಕು. ಮನೆ ಮಂದಿ, ಗಂಡಸರು ಹೆಣ್ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಡ ಹೇರಿದರೂ ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಿಜಾಬ್ ಧರಿಸುವ ಅಗತ್ಯವಿಲ್ಲವೆಂದಾದರೆ ಹೆಣ್ಮಕ್ಕಳಿಗೆ ಸ್ವಾತಂತ್ರ್ಯ ಸಿಗಬಹುದು. ಹಿಜಾಬ್ ವಿವಾದದ ವಿಚಾರಣೆ ತ್ರಿಸದಸ್ಯ ಸಾಂವಿಧಾನಿಕ ಪೀಠಕ್ಕೆ ಹೋಗಬಹುದು. ಗುರುವಾರ ಸುಪ್ರೀಂ ಕೋರ್ಟಿ ( SUPREM COURT ) ನ ನ್ಯಾಯಾಧೀಶದ್ವಯರಿಂದ ವಿಭಿನ್ನ ತೀರ್ಪು ಬಂದಿದ್ದು, ದೇಶದಲ್ಲಿ ಹಿಜಾಬ್ ಅಗತ್ಯವಿದೆಯೋ ಇಲ್ಲವೋ ಎನ್ನುವುದನ್ನು ತ್ರಿಸದಸ್ಯ ಪೀಠ ನಿರ್ಣಯಿಸಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಾಗರಿಕರು, ಮಹಿಳೆಯರು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡುವ ತೀರ್ಪನ್ನು ಕೋರ್ಟ ನೀಡುವ ವಿಶ್ವಾಸವಿದೆ ಎಂದು ಹೇಳಿದ್ರು.
ಇದನ್ನೂ ಓದಿ :- ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು – ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ – ನಳೀನ್ ಕುಮಾರ್ ಕಟೀಲ್