ಕೋಲಾರ (Kolar) ದ ಕೆಸಿ ವ್ಯಾಲಿ ನೀರಿ (KC valley) ನಲ್ಲಿ ನಿನ್ನೆ ಮಧ್ಯಾಹ್ನ ನೊರೆ ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರ ಆಂತಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. (B
ಇನ್ನು ಬೆಳ್ಳಂದೂರು (Belandaru) ಬಳಿ ಇರುವ ನೀರಿನ ಸಂಪ್ ಬಳಿ ಸ್ಥಳಿಯರು ಬಟ್ಟೆ ತೊಳೆಯುತ್ತಿದ್ದರು. ಇದರಿಂದ ಸೋಪು ಕೆಸಿ ವ್ಯಾಲಿ ನೀರಿನಲ್ಲಿ ಮಿಶ್ರಣಗೊಂಡು. ಕೋಲಾರದ ಲಕ್ಷ್ಮಿಸಾಗರ ಕೆರೆ ಬಳಿ ಕೆ ಸಿ ವ್ಯಾಲಿಯ ನೀರಿನಲ್ಲಿ ನೊರೆ ಕಾಣಿಸಿಕೊಂಡಿದೆ. ಇದನ್ನೂ ಓದಿ : – ಕೊಡಗಿನ ರಾಮಕೋಲ್ಲಿಯಲ್ಲಿ ಜಲಸ್ಫೋಟ – 25 ಎಕರೆಯಷ್ಟು ಪ್ರದೇಶದ ಬೆಟ್ಟ ಬಿರುಕು
ಕೂಡಲೇ ಅಧಿಕಾರಿಗಳು ಕೆಸಿ ವ್ಯಾಲಿಯ ನೀರಿನ ಸಂಪ್ ಗೆ ಬಾಗಿಲು ಹಾಕಿಸಿದ್ದರಿಂದ ಕೋಲಾರ ಜಿಲ್ಲೆಯ ಜನರಲ್ಲಿ ಮೂಡಿದ್ದ ಅಂತಕವನ್ನು ದೂರ ಮಾಡಿದ್ರು. ಕೆಸಿ ವ್ಯಾಲಿ ಇಂಜಿನಿಯರ್ ಕೃಷ್ಣ ಈ ಬಗ್ಗೆ ಮಾಹಿತಿ ನೀಡಿದ್ದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ : – ಶಿವಮೊಗ್ಗ ಹಾಗೂ ಶಂಕರ ಘಟ್ಟದ ರಸ್ತೆ ಪಕ್ಕದಲ್ಲಿ ಹುಲಿ ಪ್ರತ್ಯಕ್ಷ – ಜನರಲ್ಲಿ ಮನೆ ಮಾಡಿದ ಆತಂಕ