ಶಾಲೆಗೆ ಹೋಗುವ ರಸ್ತೆಯಲ್ಲಿ ವಾಮಾಚಾರ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣಿಬೆನ್ನೂರು (Ranibennur)ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ .
ಕೋಳಿ,ನಿಂಬೆಹಣ್ಣು,ಕುಂಕುಮ,ಭಂಡಾರ ಚೆಲ್ಲಿ ಮಾಟ ಮಂತ್ರ ಮಾಡಿದ್ದಾರೆ . ದಿನ ಬೆಳಗಾದ್ರೆ ಚಿಕ್ಕ ಮಕ್ಕಳು ಶಾಲೆಗೆ ಓಡಾಡುವ ರಸ್ತೆಯಲ್ಲಿ ವಾಮಾಚಾರ ಮಾಡ್ತಿದ್ದಾರೆ . ಕೋಳಿ ತಲೆ ಕತ್ತರಿಸಿ ನಿಂಬೆಹಣ್ಣು ಕುಂಕಮ ಚೆಲ್ಲಿದ್ದಾರೆ . ವಾಮಾಚಾರ ಕಂಡು ಶಾಲಾ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ .ಸೋಮಲಾಪುರದ ಸರ್ಕಾರಿ ಶಾಲೆ ಕಟ್ಟಡದ ಮುಂಬಾಗದ ರಸ್ತೆಯಲ್ಲಿ ವಾಮಾಚಾರ ನಡೆದಿದೆ . ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಮಕ್ಕಳು ಶಾಲೆಗೆ ಭಯದಿಂದ ಬರುತ್ತಿದ್ದಾರೆ . ಈ ಕೃತ್ಯ ಎಸಗಿರುವವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಇದನ್ನೂ ಓದಿ : – ಕಾರು ಟಿಟಿ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು