ಕಳೆದ ವರ್ಷದಂದು ಮೃತಪಟ್ಟ ವ್ಯಕ್ತಿಯೂ ಕೋಮಾ (Coma) ದಲ್ಲಿದ್ದಾನೆ ಎಂದು ಅಂದುಕೊಂಡು ಸುಮಾರು 18 ತಿಂಗಳಿನಿಂದ ಮೃತದೇಹವನ್ನು ಕುಟುಂಬಸ್ಥರು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಚಿತ್ರ ಘಟನೆ ಕಾನ್ಪುರ (Kanpura) ದಲ್ಲಿ ನಡೆದಿದೆ. ಮೃತ ವ್ಯಕ್ತಿ ಆದಾಯ ತೆರಿಗೆ (Income tax) ಇಲಾಖೆಯ ಉದ್ಯೋಗಿಯಾಗಿದ್ದು, ಆತನ ಪತ್ನಿ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ.
ವ್ಯಕ್ತಿ ಕೋಮಾದಿಂದ ಶೀಘ್ರ ಹೊರಗೆ ಬರಲೆಂದು ಪ್ರತಿದಿನ ಬೆಳಗ್ಗೆ ಪತ್ನಿ ಕೊಳೆತು ಹೋಗಿದ್ದ ಶವದ ಮೇಲೆ ಗಂಗಾಜಲವನ್ನು ಎರಚುತ್ತಿದ್ದಳು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಅವರು ಕಳೆದ ವರ್ಷ ಏಪ್ರಿಲ್ ನಲ್ಲಿ ಕಾರ್ಡಿಯಾಕ್ ರೆಸ್ಪಿರೇಟರಿ ಸಿಂಡ್ರೋಮ್ ನಿಂದ ಮೃತಪಟ್ಟಿದ್ದರು. ಆದರೆ ಕುಟುಂಬಸ್ಥರು ವ್ಯಕ್ತಿ ಕೋಮಾದಲ್ಲಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಲು ಹಿಂಜರಿದಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಅಲೋಕ್ ರಂಜನ್ ತಿಳಿಸಿದ್ದಾರೆ. ವಿಮಲೇಶ್ ದೀಕ್ಷಿತ್ ಅವರ ಕುಟುಂಬಸ್ಥರು ಪಿಂಚಣಿ ಫೈಲ್ ಗಳನ್ನು ಚಾಲ್ತಿಗೊಳಿಸದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು ಮನವಿ ಮಾಡಿದ್ದರು. ಹೀಗಾಗಿ ಶುಕ್ರವಾರ ರಾವತ್ ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜೊತೆಗೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರು ವಿಮಲೇಶ್ ದೀಕ್ಷಿತ್ ಜೀವಂತವಾಗಿದ್ದಾರೆ. ಇದನ್ನು ಓದಿ :- ವೀರಶೈವ ಲಿಂಗಾಯಿತರನ್ನಒಡೆದವರು ಯಾರು..? – ಬಿ.ವೈ.ವಿಜಯೇಂದ್ರ ಪ್ರಶ್ನೆ
ಆದರೆ ಕೋಮಾದಲ್ಲಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಈ ವಿಚಾರವಾಗಿ ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರಿಗೆ, ನೆರೆಹೊರೆಯವರಿಗೂ ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಅವರ ಮನೆಯವರು ತಿಳಿಸಿದ್ದು, ಅವರ ಪತ್ನಿ ಮಾನಸಿಕ ಅಸ್ವಸ್ಥರಂತೆ ಕಾಣಿಸುತ್ತಾರೆ. ಅಲ್ಲದೇ ಅವರ ಮನೆಯವರು ಆಗಾಗ ಆಕ್ಸಿಜನ್ ಸಿಲಿಂಡರ್ ಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನು ಓದಿ :- ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಕಾರಜೋಳ ವಾಗ್ದಾಳಿ