ವಿಜಯಪುರ (Vijaypura) ದಲ್ಲಿ ಸತತವಾಗಿ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಸ್ತೆಗಳನ್ನು ಮಳೆ ನೀರು ಆವರಿಸಿದೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗಿದೆ.
ನಾಲತವಾಡ ಪಟ್ಟದಣಲ್ಲಿನ 13ನೇ ವಾರ್ಡ್ ನಲ್ಲಿ ನೀರು ನಿಂತಿದೆ. ವಾರ್ಡ್ ನ ಮನೆಗಳ ಮುಂದೆಲ್ಲ ನೀರು ಸಂಗ್ರಹವಾಗಿ ನಿಂತಿದೆ. ರಸ್ತೆ ಮೇಲೆ ಓಡಾಡದಂತಹ ಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. ಇಲ್ಲಿನ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ನಾಲತವಾಡ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ.
ಇದನ್ನೂ ಓದಿ : – ನಿಲ್ಲದ ಮಳೆಯ ಅವಾಂತರ – ಕರ್ನಾಟಕದ 10 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ