ಬಿಜೆಪಿ ಯವರು ಅನೈತಿಕವಾಗಿ ಅಧಿಕಾರಕ್ಕೆ ಬಂದವರು. ಜನರ ಆಶೀರ್ವಾದದಿಂದ ಬಂದವರಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಬಿಜೆಪಿ ( BJP ) ಯವರು ಕಳೆದ 3 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಆದರೆ ಯಾವುದೇ ಕೆಲಸ ಮಾಡಿಲ್ಲ. ಅದಕ್ಕೆ 40% ಸರ್ಕಾರ ಅಂತ ಕರೆಸಿಕೊಳ್ತಾರೆ. ವರ್ಗಾವಣೆ, ಟೆಂಡರ್, ನೇಮಕ ಎಲ್ಲವೂ ದುಡ್ಡಿಲ್ಲದೆ ಆಗಲ್ಲ. ರಾಜ್ಯವನ್ನ ಅವರು ಹಾಳು ಮಾಡ್ತಿದ್ದಾರೆ. ದ್ವೇಷದ ಮೂಲಕ ಸಾಮರಸ್ಯ ಹಾಳು ಮಾಡ್ತಿದ್ದಾರೆ. ಜನ ಭಯ ಭೀತಿಯಲ್ಲಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ರಾಜ್ಯ ನಾಶವಾಗುತ್ತೆ. ಹಾಗಾಗಿ ಚುನಾವಣೆಯಲ್ಲಿ ಬಿಜೆಪಿಯನ್ನ ಸೋಲಿಸಬೇಕು. ಇಂತ ಭ್ರಷ್ಟ,ಕೋಮುವಾದಿ ಸರ್ಕಾರವನ್ನು ನಾನು ನೋಡಿಲ್ಲ. ರಾಜ್ಯ ಉಳಿಯಬೇಕಾದರೆ ಬಿಜೆಪಿ ಸೋಲಿಸಲೇಬೇಕು ಎಂದು ಹೇಳಿದ್ರು.
ಇದನ್ನೂ ಓದಿ : – ಕೇವಲ ಬಾಯಿ ಮಾತಲ್ಲಿ ಹೇಳಿದ್ರೆ ಸಾಕಾಗಲ್ಲ ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸಿ – ಯತ್ನಾಳ್