ಸಿಎಂ ಬೊಮ್ಮಾಯಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಬೇಕು – ಹೆಚ್.ಡಿ ಕುಮಾರಸ್ವಾಮಿ

ಮಧುಗಿರಿ ವಿಧಾನಸಭಾ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಮನೆಯ ಸಂಪ್ನಲ್ಲಿ ಮುಳುಗಿದ್ದ 4 ವರ್ಷದ ಬಾಲಕ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ವಿಳಂಬದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಕಲ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಮಧುಗಿರಿ ( MADHUGIRI  )ವಿಧಾನಸಭಾ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಮನೆಯ ಸಂಪ್ನಲ್ಲಿ ಮುಳುಗಿದ್ದ 4 ವರ್ಷದ ಬಾಲಕ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ವಿಳಂಬದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARASWAMY ) ಸರಣಿ ಟ್ವೀಟ್ ಮಾಡುವ ಮೂಕಲ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ, ಯಾವ ಮಟ್ಟಕ್ಕೆ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮಧುಗಿರಿ ವಿಧಾನಸಭೆ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ನಡೆದ 4 ವರ್ಷದ ಬಾಲಕನ ದುರಂತ ಮರಣವೇ ಸಾಕ್ಷಿ.

ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್ ಇದ್ದರೂ ಚಾಲಕನಿರಲಿಲ್ಲ.ಗ್ರಾಮೀಣ ಪ್ರದೇಶದ ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ ಇದು. ಆರೋಗ್ಯ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ ಇದು. ಕೇವಲ ಒಂದೇ ವಾರದಲ್ಲಿ ಇಂಥ 2 ಸಾವುಗಳು ಅಲ್ಲೇ ಆಗಿರುವುದು ರಾಜ್ಯ ಬಿಜೆಪಿ ( BJP ) ಸರಕಾರ ತಲೆ ತಗ್ಗಿಸುವ ಸಂಗತಿ.

ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ.

ನನ್ನ ನೇತೃತ್ವದ ಪಂಚರತ್ನ ರಥಯಾತ್ರೆ ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಗೆ ಬಂದಾಗ ನಾನು ಈ ದುರಂತವನ್ನು ಕಣ್ಣಾರೆ ಕಂಡೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಬಡಿದ ಅನಾರೋಗ್ಯದ ಸಾಕ್ಷಾತ್ಕಾರ ನನಗಾಯಿತು. ರೋಗಗ್ರಸ್ತ ಬಿಜೆಪಿ ಆಡಳಿತದಲ್ಲಿ ಆಸ್ಪತ್ರೆಗಳು ಸಾವಿನ ಕೂಪಗಳೇ ಆಗಿವೆ.  ಇದನ್ನೂ ಓದಿ : –  ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ವಿಧಿವಶ – ಸಂತಾಪ ಸೂಚಿಸಿದ ಹೆಚ್ಡಿಕೆ

ಆ ಕಂದನ ಸಾವಿಗೆ ನ್ಯಾಯ ಬೇಕಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ, ಆರೋಗ್ಯ ಸಚಿವರೇ ಹೊಣೆ. ಆತ್ಮಸಾಕ್ಷಿ ಎನ್ನುವುದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ @BSBommai ಅವರಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಬೇಕು.

ಅಲ್ಲದೆ; ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿದೆ.

ನೊಂದ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಮುಂದೆ ಎಲ್ಲಿಯೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ದುರ್ಮರಣ ಹೊಂದಿದ ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : – ಚಿಕಿತ್ಸೆ ವಿಳಂಬದಿಂದ ಬಾಲಕ ಸಾವು – ಮೃತದೇಹವನ್ನು ಜೆಡಿಎಸ್ ಸಮಾವೇಶಕ್ಕೆ ಹೊತ್ತುತಂದ ಪೋಷಕರು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!