ತುಮಕೂರು (Tumkuru) ನಲ್ಲಿ ವಿದ್ಯುತ್ ಲೈನ್ಗೆ ತೊಂದರೆ ಎಂದು ರೈತರ ಅಡಿಕೆ ಹಾಗೂ ಎಲೆಹಂಬನ್ನು ಬೆಸ್ಕಾಂ (Bescom) ನವರು ಕಡಿದಿದ್ದಾರೆ.
ಹಳೆ ಗುಬ್ಬಿ (Gubbi) ಯ ಗಂಗರೇವಣ್ಣ(Gangarevanna) ರಿಗೆ ಸೇರಿದ ಅಡಿಕೆ ಮರ ಹಾಗೂ ವಿಳ್ಯದೆಲೆ ಬಳ್ಳಿಗಳನ್ನು ಬೆಸ್ಕಾಂ ಸಿಬ್ಬಂದಿ ನಾಶ ಪಡಿಸಿದ್ದಾರೆ. ವಿದ್ಯುತ್ ತಂತಿಗೆ ತೊಂದರೆ ಆಗುತ್ತಿದ್ದರೆ ಅದನ್ನ ತೆರವುಗೊಳಿಸಬೇಕಿತ್ತು. ಆದರೆ ಮಾಹಿತಿ ನೀಡದೇ ಏಕಾಏಕಿ ಮರ ಕಡಿದು ದೌರ್ಜನ್ಯ ಎಸಗಿದ್ದಾರೆಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಲವು ವರ್ಷಗಳಿಂದ ವಿದ್ಯುತ್ ಲೈನ್ ತೋಟದ ಮಧ್ಯೆ ಇತ್ತು. ಇದನ್ನೂ ಓದಿ : – ರಾಜ್ಯದಲ್ಲಿ ಜುಲೈ 5ರವರೆಗೆ ಭಾರೀ ಮಳೆ – ಬೆಂಗಳೂರಿನಲ್ಲೂ 3 ದಿನ ಯೆಲ್ಲೋ ಅಲರ್ಟ್
ಈ ಬಗ್ಗೆ ಲೈನ್ ಬದಲಿಸುವಂತೆ ಬೆಸ್ಕಾಂಗೆ ಹಲವು ಬಾರಿ ರೈತರು ಅರ್ಜಿ ಸಲ್ಲಿಸಿದ್ದರು. ಬದಲಾಯಿಸುವ ವೆಚ್ಚ ಕೂಡ ರೈತನೇ ಭರಿಸುವುದಾಗಿ ತಿಳಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೆಂದು ಆರೋಪಿಸಿದ್ದಾರೆ. ಜಮೀನಿಗೆ ರೈತ ಸಂಘದವರು ಭೇಟಿ ನೀಡಿ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : – ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಕ್ರಮ- ಸಿಎಂ ಬೊಮ್ಮಾಯಿ