ಹಾವೇರಿ (Haveri) ಯಲ್ಲಿ ಸಮ್ಮೇಳನ ನಡೆಯುವುದಕ್ಕೆ ಮೊದಲು ಪರಿಷತ್ ನ ಸ್ವಂತ ಕಟ್ಟಡ ಆಗಬೇಕು ಎನ್ನುವ ಹಂಬಲ ನಮ್ಮದು ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ (Mahesh joshi) ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಅದಕ್ಕಾಗಿಯೇ ನಾಲ್ಕು ಗುಂಟೆ ಭೂಮಿಯನ್ನ ತಗೆದುಕೊಂಡಿದ್ದೇವೆ.
ಭವ್ಯವಾದ ಕಟ್ಟಡ ಆಗುತ್ತೆ ಎನ್ನುವ ವಿಶ್ವಾಸ ನಮ್ಮದು. ಸಮ್ಮೇಳನ ಮುಗಿದ ಮೇಲೆ ನಾನೇ ಪಾದಯಾತ್ರೆ (Padhayatre) ಮಾಡಿ ಇಲ್ಲಿ ದೇಣಿಗೆ ಸಂಗ್ರಹಿಸುತ್ತೇನೆ. ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ನಡೆಯುತ್ತಿದೆ. ಮೊನ್ನೆ ಉಸ್ತುವಾರಿ ಸಚಿವರು ಪೂರ್ವ ಸಿದ್ದತೆ ಆಗಿಲ್ಲ ಸಮ್ಮೇಳನ ಮುಂದಕ್ಕೆ ಹೋಗಬಹುದು ಎಂದು ಹೇಳಿದ್ರು. ಎರಡು ದಿನ ಆದ ಮೇಲೆ ಮುಖ್ಯಮಂತ್ರಿಗಳು ಅದೆ ದಿನಾಂಕಕ್ಕೆ ಸಮ್ಮೇಳನ ಮಾಡ್ತಿವಿ ಎಂದಿದ್ದಾರೆ. ಇದು ನಮಗೆಲ್ಲ ಬೇಸರ ತಂದಿದೆ ಎಂದು ಹೇಳಿದ್ರು. ಮುಖ್ಯಮಂತ್ರಿಗಳು ಇದೆ ಜಿಲ್ಲೆಯವರು, ನಾನು ಇದೆ ಜಿಲ್ಲೆಯವನು. ಈ ಕಾರಣಕ್ಕೆ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ.ನಾಲ್ಕು ಭಾರಿ ಸಭೆ ನಡೆಸುವಂತೆ ಮನವಿ ಮಾಡಿದ್ದೆ. ದಿನಾಂಕ ಘೋಷಣೆ ಮಾಡಿದ ಮೇಲೆ ಲಾಂಚನ ಬಿಡುಗಡೆ ಆಗಬೇಕಿತ್ತು. ಹಲವು ಸಮಿತಿಗಳ ರಚನೆ ಆಗಬೇಕಿತ್ತು. 20 ಸಮಿತಿಗಳನ್ನ ಮಾಡುವಂತೆ ಹೇಳಿದ್ರು ಮಾಡಿಲ್ಲ. ನಮಗೆ ಈಗ ಅನಿಶ್ಚಿತತೆ ಕಾಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಇದೇ ವೇಳೆ ಪ್ರತಿನಿಧಿಗಳ ನೊಂದಣಿಯಾಗಿಲ್ಲ, ಪ್ರತಿನಿಧಿಗಳ ನೋಂದಣಿಗೆ ಒಂದು ತಿಂಗಳು ಬೇಕು. ತುಂಬ ಬೇಸರವಾಗಿದೆ, ದು:ಖವಾಗಿದೆ ಎಂದು ಹೇಳಿದರು.ಹಲವು ಸಲ ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡುತ್ತಾರೆ. ಮೈಸೂರು ದಸರಾ ಆಚರಣೆಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನ ಪಕ್ಕಕ್ಕೆ ತಳ್ಳಿದ್ರು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕಸಪಾ ಅಧ್ಯಕ್ಷರಿಲ್ಲ. ಸಮ್ಮೇಳನ ನಡೆಯೊತ್ತೊ ಇಲ್ಲವೊ ಎನ್ನುವುದನ್ನ ಮೂಕನಾಗಿ ನೋಡುವ ಸ್ಥಿತಿ ಬಂದಿದೆ ಎಂದು ಕಿಡಿ ಕಾರಿದ್ರು.ಇದನ್ನೂ ಓದಿ : – ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ- ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ
ಈ ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಒಂದು ಪೈಸೆ ಬಂದಿಲ್ಲ ಎಂದು ಆರೋಪಿಸಿದ್ರು. ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಸ್ವಾಭಿಮಾನ ಬಿಟ್ಟು ಹೋಗಲ್ಲ. ನಾಲ್ಕು ಸಲ ಸಭೆ ಕರೆದು ಕ್ಯಾನ್ಸಲ್ ಮಾಡಿದ್ರು. ನವೆಂಬರ್ 11,12,13 ಕ್ಕೆ ಸಮ್ಮೇಳನ ನಡೆಯಲು ಸಾಧ್ಯವಿಲ್ಲ. ಮೊದಲು ಇದ್ದ ಉತ್ಸಾಹ ಕಡಿಮೆಯಾಗ್ತಿದೆ. ಪ್ರತಿ ಹೆಜ್ಜೆಗೂ ನಮಗೆ ಸಹಕಾರ ಸಿಗ್ತಿಲ್ಲ ಎಂದು ಮಹೇಶ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : – ಚಿಕ್ಕಮಗಳೂರಿನ ಮೂಡಿಗೆರೆ ಪಟ್ಣದಲ್ಲಿ ಕಾಡಾನೆಗಳ ರಾಜನಡಿಗೆ…!