ಕಾಂಗ್ರೆಸ್ (Congress) ಪಕ್ಷ ಅಂದ್ರೆ ಗೂಂಡಾಗಳ ಪಕ್ಷ, ರೌಡಿಗಳ ಪಕ್ಷ ಅನ್ನೋದು ಸಾರ್ವತ್ರಿಕವಾಗಿ ಗೊತ್ತಿರೋ ವಿಚಾರ ಎಂದು ಡಿ.ಕೆ. ಶಿವಕುಮಾರ್ (DK.Shivakumar) ಗೆ ಸಚಿವ ಅಶ್ವಥ್ ನಾರಾಯಣ್ (Ashwath narayan) ಟಾಂಗ್ ಕೊಟ್ಟಿದ್ದಾರೆ. ಅವರ ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದ್ರೆ ಗೊತ್ತಾಗುತ್ತೆ.
ಬಿಜೆಪಿ (BJP) ಜನಪರವಾಗಿರುವಂತದ್ದು, ಜನರ ಪಕ್ಷ. ಕಾಂಗ್ರೆಸ್ ಪಕ್ಷ ತನ್ನ ಅವಲೋಕನ ಮಾಡಿಕೊಂಡ್ರೆ ಉತ್ತಮ. ಪ್ರಚಾರಕ್ಕಾಗಿ ಏನೇನೋ ಮಾಡ್ತಿದ್ದಾರೆ ಇದಕ್ಕೆ ಯಾವುದೇ ಮಾನ್ಯತೆ , ಮನ್ನಣೆ ಇಲ್ಲ ಎಂದು ಹೇಳಿದ್ರು.
ಸೋಮಣ್ಣ (V. Somanna) ಅವರ ಕಚೇರಿಗೆ ವಿಲ್ಸನ್ ಗಾರ್ಡನ್ ನಾಗ (Wilson garden naga) ಭೇಟಿ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಸಾರ್ವಜನಿಕವಾಗಿ ಎಲ್ಲರಿಗೂ ಜನಪ್ರತಿನಿಧಿಗಳನ್ನು ಭೇಟಿಯಾಗೋ ಹಕ್ಕು ಇದೆ. ಇದನ್ನೂ ಓದಿ : – ಜೆಡಿಎಸ್ ಸುನಾಮಿ ಅಲೆಯಲ್ಲಿ ಎಲ್ಲಾ ಪಕ್ಷಗಳು ಕೊಚ್ಚಿ ಹೋಗುತ್ತವೆ – ಮಾಜಿ ಸಿಎಂ ಕುಮಾರಸ್ವಾಮಿ
ಸಾಮಾನ್ಯವಾಗಿ ಭೇಟಿಯಾಗಿ, ಸಾರ್ವಜನಿಕವಾಗಿ ಮಾತನಾಡಿಸಿದ್ದಾರೆ. ಅದಕ್ಕೆ ಯಾವುದೇ ಮಹತ್ವ ಕೊಡೋ ಅವಶ್ಯಕತೆ ಇಲ್ಲ. ಬಿಜೆಪಿಗೆ ಅಂತಹ ಯಾವುದೇ ಅವಶ್ಯಕತೆ ಇಲ್ಲ , ಜನಪರವಾಗಿ ನಾವು ಕೆಲಸ ಮಾಡ್ತಿದ್ದೇವೆ. ಆ ತರಹದ ಅವಶ್ಯಕತೆ ಇದ್ರೆ ಕಾಂಗ್ರೆಸ್ ಪಕ್ಷಕ್ಕೆ ಇರಬಹುದು ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ : – ಧಾರವಾಡದ ಗರಗ ಪೊಲೀಸ್ ಠಾಣೆ ಹತ್ತಿರ ಸುರಂಗ ಮಾರ್ಗ ಪತ್ತೆ- ಏಕಾಏಕಿ ಕುಸಿದ ರಸ್ತೆ