ಕೋಲಾರ (Kolar) ಜಿಲ್ಲೆ ಮುಳಬಾಗಿಲು ಮೀಸಲು ಕ್ಷೇತ್ರದಿಂದ 2013 ರಲ್ಲಿ ಕೊತ್ತೂರು ಮಂಜುನಾಥ್ (Kothur manjunath) ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಲ್ಲಿಸಿರುವ ಆರೋಪ ಮಾಡಲಾಗಿದೆ.
ದಶಕದಿಂದ ಜಾತಿ ಪ್ರಮಾಣ ಪತ್ರ ಕುರಿತು ವಿವಾದಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ (Supreme court) ನ ಹಾಲ್ ನಂಬರ್ ೮ ರಲ್ಲಿ ೧೨ ನೇ ಪ್ರಕರಣವಾಗಿ ಇಂದು ಲಿಸ್ಟ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ೫೬ ಪುಟಗಳ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ವರದಿ ಆದರಿಸಿ ಸುಪ್ರೀಂಕೋರ್ಟ್ ನಲ್ಲಿ ಕೊತ್ತೂರು ಮಂಜುನಾಥ್ ಪರ ವಕೀಲರು ವಾದವನ್ನು ಮಂಡಿಸಲಿದ್ದಾರೆ. ಇದನ್ನು ಓದಿ :- ಹರಿಪ್ರಸಾದ್ ಅವರೇ ನೀವು ಯಾವ ಸೀಮೆ ನಾಯಕರು ? ಶ್ರೀರಾಮುಲು ಪ್ರಶ್ನೆ
ಬಹುತೇಕ ಜನವರಿ ೨೦ ರ ಒಳಗೆ ಜಾತಿ ಪ್ರಮಾಣದ ಪತ್ರದ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆಯಿದೆ. ಮುಳಬಾಗಿಲು ಅಥವಾ ಕೋಲಾರದಿಂದ ಸ್ಪರ್ಧಿಸುವ ಇಂಗಿತವನ್ನು ಕೊತ್ತೂರು ಮಂಜುನಾಥ್ ಹೊಂದಿದ್ದಾರೆ. ಸದ್ಯ ಸುಪ್ರೀಂಕೋರ್ಟ್ ನ ತೀರ್ಪು ತೀವ್ರ ಕೂತೂಹಲ ಕೆರಳಿಸಿದೆ.
ಇದನ್ನು ಓದಿ :- ಇಂದು ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರವಾಸ