ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಗೆ ಕ್ಷಮೆ ಕೇಳಿದ ಕುಮಾರಸ್ವಾಮಿ

ನಾನು ಬಳಸಿದ ಅವಾಚ್ಯ ಶಬ್ಧ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಮಾಜಿ ಸ್ಪೀಕರ್​ ರಮೇಶ್ ಕುಮಾರ್‌ ( RAMESH KUMAR ) ಹಾಗೂ ಅವರ ಅಭಿಮಾನಿಗಳಿಗೆ, ಮಾಜಿ ಮುಖ್ಯಮಂತ್ರಿ ಹೆಚ್​​ .ಡಿ ಕುಮಾರಸ್ವಾಮಿ ( H.D KUMARSWAMY ) ಕ್ಷಮೆ ಕೇಳಿದ್ದಾರೆ. ನಾನು ಬಳಸಿದ ಅವಾಚ್ಯ ಶಬ್ಧ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಕೋಲಾರ ( KOLARA )ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಾಸ್ತೇನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ವೇಳೆ, ಅಲ್ಲಿನ ಮಕ್ಕಳ‌ ಪರಿಸ್ಥಿತಿ ನೋಡಿ ಬಾಯಿ ತಪ್ಪಿ ರಮೇಶ್ ಕುಮಾರ್ ಅವರ ವಿರುದ್ಧ ಅವಾಚ್ಯ ಶಬ್ಧ ಪದ ಬಳಕೆ ಮಾಡಲಾಗಿದೆ. ಮಕ್ಕಳು ಬೀದಿಯಲ್ಲಿ ಚಳಿ‌ ಗಾಳಿ ಮಳೆ ಲೆಕ್ಕಿಸದೆ ಪಾಠ ಕಲಿಯುತ್ತಿದ್ದಾರೆ. ಮಕ್ಕಳ ಗೋಳನ್ನು ನೋಡಿ ಆ ಪದಬಳಕೆ ಮಾಡಿರುವೆ. ಯಾರಿಗಾದ್ರು ಮನಸ್ಸಿಗೆ ನೋವಾಗಿದ್ರೆ, ರಮೇಶ್ ಕುಮಾರ್ ಹಾಗೂ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತಿರುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹಾರಾಡಿದ ಪಾಕ್ ಬಾವುಟ…!

ಇದನ್ನೂ ಓದಿ : – ಅರ್ಜೆಂಟೀನಾ ವಿರುದ್ಧ ಗೆಲುವು –ಇಂದು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!