ಬಳ್ಳಾರಿ (Ballari) ಯ ಸಂಡೂರಿನಿಂದ ಎನ್ ಎಂಡಿಸಿ ಹೋಗೋ ದಾರಿಯಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ. ರಾಜಾರೋಷವಾಗಿ ದಾರಿಯಲ್ಲಿ ಚಿರತೆ ಓಡಾಡಿದೆ. ಗಣಿಗಾರಿಕೆ ಕಡಿಮೆಯಾದ ಬಳಿಕ ಚಿರತೆಯ ಓಡಾಟ ಹೆಚ್ಚಾಗಿದೆ.
ಎನ್ಎಂಡಿಸಿ ನಿವಾಸಿಗಳಿಗೆ ಚಿರತೆಯಿಂದ ಆತಂಕ ಎದುರಾಗಿದೆ. ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಸಂಡೂರು ಈಗ ಸಂಪೂರ್ಣ ಹಸಿರುಮಯವಾಗಿದೆ. ಹೀಗಾಗಿ ನವಿಲು, ಕರಡಿ, ಚಿರತೆ ಸೇರಿದಂತೆ ಸಾಕಷ್ಟು ಪ್ರಾಣಿಗಳು ಹೆಚ್ಚಾಗಿ ಒಡಾಡ್ತಿವೆ ಎನ್ನಲಾಗ್ತಿದೆ. ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಚಿರತೆಗಳು ಹೆಚ್ಚಾಗಿ ಕಾಣಸಿಕ್ಕಿರಲಿಲ್ಲ.
ಇದನ್ನೂ ಓದಿ : – ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ – ಇಬ್ಬರು ಆರೋಪಿಗಳ ಬಂಧನ