Siddaramiah – ಬಾದಾಮಿ ಜನರಿಗೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿದ್ದರಾಮಯ್ಯ

ಮತ್ತೇ ಬಾದಾಮಿಯಿಂದಲೇ ಸ್ಫಧೆ೯ ಮಾಡುವಂತೆ ಅಭಿಮಾನಿಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನೋಡೋಣ, ಎಲೆಕ್ಷನ್ (Election) ಗೆ ಇನ್ನೂ ಒಂದು ವಷ೯ ಇದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೋಲಿಸೋಕೆ ಆಗುತ್ತಾ ಅಂತ ಪ್ರಶ್ನಿಸಿದ್ರು.  ಬಾದಾಮಿ ದೂರ ಅನ್ನೋದು ಬಿಟ್ಟರೆ, ಬಾದಾಮಿ (Badami) ಜನ ಬಹಳ ಒಳ್ಳೆಯವರು. ಕೇವಲ ಶಾಸಕನಾಗಿದ್ರೆ ವಾರದಲ್ಲಿ ಎರಡು ದಿನ ಬಂದು ಜನರ ಸಮಸ್ಯೆ ಕೇಳಬಹುದಾಗಿತ್ತು. ಇದನ್ನು ಓದಿ – ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ – ಸಿದ್ದರಾಮಯ್ಯ

ನಾನು ಬರೀ ಎಂಎಲ್ ಎ ಅಲ್ಲ, ವಿಧಾನ ಸಭೆ ವಿಪಕ್ಷ ನಾಯಕ.  ಹೀಗಾಗಿ ಬೇರೆ ಬೇರೆ ಕಡೆ ಹೋಗಬೇಕಾಗುತ್ತೆ, ಟೂರ್ ಮಾಡಬೇಕಾಗುತ್ತೆ. ಸಮಸ್ಯೆಗಳಿವೆ ಎಂದು ಹೇಳಿದ್ರು. ಅಸೆಂಬ್ಲಿ ಇತ್ತು, ಪಾದಯಾತ್ರೆ ಇದ್ದಿದ್ರಿಂದ ಕಳೆದ ತಿಂಗಳಿಂದ ಬರೋಕಾಗ್ಲಿಲ್ಲ ಎಂದು ಜನರಿಗೆ ಮನವರಿಕೆ ಮಾಡಿದ್ರು. ನಮ್ಮ ಸಮಸ್ಯೆ ಇದೆ ಅಂತ ಹೇಳಿದ್ರೆ ಕ್ಷೇತ್ರದ ಜನ ಕೇಳ್ತಾರಾ‌. ನಾನೊಬ್ಬ ಶಾಸಕನಾಗಿ ನನಗೂ ಜವಾಬ್ದಾರಿ ಇದೆ. ಈ ಕ್ಷೇತ್ರದ ಜನ ಬಹಳ ಪ್ರೀತಿ, ಅಭಿಮಾನದಿಂದ ನೋಡಿಕೊಂಡಿದ್ದಾರೆ ಎಂದು ತಿಳಿಸಿದ್ರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!