ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ( MAHARASTRA ) ನಾಯಕರ ಉದ್ಧಟತನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( C.M IBHRAHIM )ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ( KARANATAK ) ದಲ್ಲಿ ಎಲ್ಲ ಭಾಷಿಕರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ನಿಮ್ಮ ಊರು ನೀವು ಮೊದಲು ನೋಡಿಕೊಳ್ಳಿ, ನಮ್ಮದರಲ್ಲಿ ಕೈ ಆಡಿಸಲು ಬರಬೇಡಿ. ಮರಾಠಿ ಭಾಷಿಕರು ಯಾರೂ ಇಲ್ಲಿ ಇರಲು ಆಗ್ತಿಲ್ಲ ಎಂದಿಲ್ಲ, ಎಲ್ಲರೂ ಸುಖವಾಗಿ ಬದುಕುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮರಾಠಿ ಭಾಷಿಕ ರೈತರ ಸಾಲವೂ ಮನ್ನಾ ಆಗಿದೆ. ಬೆಳಗಾವಿಯಲ್ಲಿ 15 ಸಾವಿರ ಮರಾಠಾ ಭಾಷಿಕ ರೈತರ ಸಾಲಮನ್ನಾ ಆಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಹೋದ ಅಧ್ಯಾಯ. ಗಡಿವಿವಾದ ಇಲ್ಲವೇ ಇಲ್ಲ, ಮದುವೆ ಆದ ಮೇಲೆ ವಾಲಗ ಊದಿದ್ರೆ ಏನು ಪ್ರಯೋಜನ. ಮಹಾರಾಷ್ಟ್ರ ನಾಯಕರು ಖಾಲಿ ಓಲಗ ಊದುತ್ತಿದ್ದಾರೆ, ಊದುಕೊಳ್ಳಲಿ . ನಾವು ಇಲ್ಲಿ ಅರಾಮ ಆಗಿದ್ದೇವೆ ನಮ್ಮ ಕೆಲಸ ನಮಗೆ, ಅವರ ಕೆಲಸ ಅವರಿಗೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : – ಟೊಯೋಟ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ – ಸಂತಾಪ ಸೂಚಿಸಿದ ಸಿಎಂ