ರಾಜ್ಯದಲ್ಲಿ ಶುರುವಾದ ಹಿಜಾಬ್ (hijab) ವಿವಾದ ಈಗ ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು ಬೆಂಗಳೂರು ಕರಗೋತ್ಸವಕ್ಕೂ (banglore karaga) ತಟ್ಟಿದೆ. ಕೊರೋನಾ (corona) ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಸರಳವಾಗಿ ಜರುಗಿದ್ದ”ಬೆಂಗಳೂರು ಕರಗ” ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ವರ್ಷ ಹಿಜಾಬ್ (hijab) ಹಲಾಲ್ (halal) ಸಂಘರ್ಷದ ಹಿನ್ನೆಲೆಯಲ್ಲಿ ಬೆಂಗಳೂರು ಕರಗ ಉತ್ಸವದ ಮೇಲೂ ಹಿಂದೂ-ಮುಸ್ಲಿಂ ಸಂಘರ್ಷದ ಕರಿನೆರಳಿನ ಭೀತಿ ಆವರಿಸುವ ಮುನ್ನವೇ ಎಚ್ಚೆತ್ತಿರುವ ಮುಸ್ಲಿಂ ಧರ್ಮಗುರುಗಳು, ಬುಧವಾರ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಪ್ರತೀ ವರ್ಷದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ (Mastan Sab Darga) ಕರಗ ತರುವಂತೆ ಮನವಿ ಮಾಡಿದ್ದಾರೆ. ಇದನ್ನುಓದಿ-ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ಮಸ್ತಾನ್ ದರ್ಗಾ ಮಂಡಳಿ ಕೂಡ ಕರಗಮ್ಮನ ಪೂಜೆಗೆ ಸಿದ್ಧವಾಗಿದೆ. ಕರಗೋತ್ಸವ ಮೆರವಣಿಗೆ ಮಸ್ತಾನ್ ದರ್ಗಾಗೆ ಹೋಗುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಥಳೀಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್( udaygarudachar ) ಪ್ರತಿಕ್ರಿಯೆ ನೀಡಿದ್ದಾರೆ. ಕರಗ ಮೆರವಣಿಗೆ ಮಸ್ತಾನ್ ದರ್ಗಾಕೆ ಹೋಗ ಬೇಕೋ ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು ಇದನ್ನು ಹಾಗೇ ನಡೆಯಲು ಬಿಡುವುದು ಒಳ್ಳೆಯದು, ನಾನೊಬ್ಬ ಹಿಂದೂ ಆದರೂ ಕರಗ ಮಸ್ತಾನ್ ದರ್ಗಾಕ್ಕೆ ಹೋಗಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನುಓದಿ – ಪೆಟ್ರೋಲ್ ನೋ ಸ್ಟಾಕ್…ಗ್ರಾಹಕರಿಗೆ ಬಿಗ್ ಶಾಕ್ ..!