ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಬೊಮ್ಮಾಯಿ (Bommai) 20ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಎಂದು ಕೆ.ಮುಕುಡಪ್ಪ (K.Mukudappa) ಹೇಳಿದ್ದಾರೆ. ಆ ವೇಳೆ ಒಂದೇ ಟಗರು 20ಕುರಿಗಳನ್ನು ನೋಡಿಕೊಳ್ಳುತ್ತೆ.
ಆದರೆ ಸಿದ್ದರಾಮಯ್ಯ (Sidddaramaiah) ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವೆ ಎಂದು ಕೆ.ಮುಕುಡಪ್ಪ ಸಿದ್ದರಾಮಯ್ಯ ವಿಚಾರಕ್ಕೆ ಕ್ಷಮೆಯಾಚಿಸಿದರು. ಸಿದ್ದರಾಮಯ್ಯನವರು ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ನಾನೂ ಆ ಸಂದರ್ಭದಲ್ಲಿ ಅವರ ಜೊತೆ ಇದ್ದೆ ಎಂದು ನಿನ್ನೆ ಘಟನೆ ಬಗ್ಗೆ ಕೆ.ಮುಕುಡಪ್ಪ ವಿಷಾದ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : – ADGP ಅಮೃತ್ ಪಾಲ್ ಮತ್ತು DYSP ಶಾಂತ್ ಕುಮಾರ್ ಮನೆ ಮೇಲೆ ED ದಾಳಿ