ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Sri rangapatna) ದ ಬಳಿಕ ಇಂದು ಮೇಲುಕೋಟೆ (Melkote) ವಿಧಾನಸಭಾ ಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ (Pancharatna ratha yatre) ಪ್ರವೇಶ ಮಾಡಿದೆ. ನಿನ್ನೆ ರಾತ್ರಿ KRSನಲ್ಲಿ ಹೆಚ್ಡಿಕೆ ವಾಸ್ತವ್ಯ ಹೂಡಿದ್ದಾರೆ. KRS ನಾರ್ಥ್ ಬ್ಯಾಂಕ್, ಕಟ್ಟೇರಿ, ಅರಳು ಕುಪ್ಪೆ, ಕ್ಯಾತನಹಳ್ಳಿ ಕೆನ್ನಾಳು, ಪಾಂಡವಪುರ, ಚಿಕ್ಕಾಡೆ, ಕಾಳೇನಹಳ್ಳಿ, ಹುಲಿಕೆರೆ, ಹಾಡ್ಯ, ಶಿವಳ್ಳಿ ಮಾರ್ಗವಾಗಿ ಯಾತ್ರೆ ಸಂಚಾರ ಮಾಡಲಿದೆ.
ಮೇಲುಕೋಟೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಇಂದು ರಾತ್ರಿ ಹೆಚ್ಡಿಕೆ ವಾಸ್ತವ್ಯ ಹೂಡಲಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ರಥಯಾತ್ರೆ ಸ್ವಾಗತಕ್ಕೆ ಅದ್ದೂರಿ ಸಿದ್ದತೆ ನಡೆದಿದೆ. ರಥಯಾತ್ರೆಗೆ ಸಿಕ್ತಿರೋ ಅಭೂತಪೂರ್ವ ಬೆಂಬಲಕ್ಕೆ ಹೆಚ್ಡಿಕೆ (Kumarswamy) ಖುಷಿಯಾಗಿದ್ದಾರೆ. ಜಿಲ್ಲೆಯ ಜನರ ಅಭೂತಪೂರ್ವ ಬೆಂಬಲಕ್ಕೆ ಹೆಚ್ಡಿಕೆ ಟ್ವೀಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಹೆಚ್ಡಿಕೆ ಸ್ವಾಗತಕ್ಕೆ ಡಿಫರೆಂಟ್ ಡಿಫರೆಂಟ್ ಹಾರ ತಯಾರಾಗಿದೆ. ಮುತ್ತಿನಹಾರ, ಗುಲಾಬಿ ಹೂವು, ಕಬ್ಬು, ಬೆಲ್ಲದ ಬೃಹತ್ ಹಾರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ಓದಿ :- ಇಂದಿನಿಂದ ಖಾಸಗಿ ಶಾಲೆಗಳಲ್ಲಿ ಕೊರೊನಾ ರೂಲ್ಸ್ ಜಾರಿ – ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿಗಳಿಗೆ ರಜೆ
ಪಾಂಡವಪುರ ತಾಲೂಕಿನಲ್ಲಿ ಹೆಚ್ಡಿಕೆಗೆ ಡಿಫರೆಂಟ್ ಹಾರದ ಸ್ವಾಗತಕ್ಕೆ ಸಿದ್ದತೆ ನಡೆದಿದೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತ ಕೋರಲು ಕಾರ್ಯಕರ್ಯರು ಸಿದ್ದತೆಗೊಂಡಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿ ಇಂದು ಐದು ಕಡೆಯಲ್ಲಿ ಹೆಲಿಕಾಪ್ಟರ್ ಮೂಲಕ ಹೆಚ್ಡಿಕೆಗೆ ಪುಷ್ಪ ವೃಷ್ಟಿ ನಡೆಯಲಿದೆ.
ಇದನ್ನು ಓದಿ :- ವೋಟರ್ ಐಡಿ ಅಕ್ರಮ ಪ್ರಕರಣ – ಇಬ್ಬರು IAS ಅಧಿಕಾರಿಗಳ ಅಮಾನತು ವಾಪಸ್