ಭಾರತ್ ಜೋಡೋ ( BHARATH JODO ) ಯಾತ್ರೆಯಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ( CONGRESS ) ನಾಯಕ ರಾಹುಲ್ ಗಾಂಧಿ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಕೈಬಿಟ್ಟಿದ್ರು. ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು, ಕಾಂಗ್ರೆಸ್ಗೆ ಉತ್ತಮ ಫಲಿತಾಂಶವನ್ನು ನೀಡಿದೆ.
हिमाचल की जनता ने तय कर लिया है कि
युवाओं को बेरोजगार रखने वाली BJP नहीं, रोजगार देने वाली कांग्रेस सरकार चाहिए
पुरानी पेंशन छीनने वाली BJP नहीं, OPS लागू करने वाली कांग्रेस सरकार चाहिए
महंगाई लाने वाली BJP नहीं, महंगाई से राहत देने वाली कांग्रेस सरकार चाहिएकांग्रेस आ रही है। pic.twitter.com/HJJsPwuxc4
— Priyanka Gandhi Vadra (@priyankagandhi) November 7, 2022
ರಾಜ್ಯದಲ್ಲಿ ಪಕ್ಷ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ. ಅದರಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ( CONGRESS ) ಪ್ರಧಾನ ಕಾರ್ಯದರ್ಶಿಯ ಮೋಡಿ ಕೆಲಸ ಮಾಡಿಲ್ಲ. ಆದರೆ, ಪ್ರತಿ ಐದು ವರ್ಷಗಳ ನಂತರ ಸರ್ಕಾರಗಳನ್ನು ಬದಲಾಯಿಸುವ ಗುಡ್ಡಗಾಡು ರಾಜ್ಯದಲ್ಲಿ ಮಾತ್ರ ಬಿಜೆಪಿಯನ್ನು ಮೀರಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಇದನ್ನು ಓದಿ : – ಗುಜರಾತ್ ನಲ್ಲಿ ಆಪ್ ಗೆ ಬಿಜೆಪಿಯಿಂದಲೇ ಫಂಡಿಂಗ್- ಸಿದ್ದರಾಮಯ್ಯ
देवभूमि को है परम्पराओं से लगाव, हिमाचल में तय है बदलाव।#आ_रही_है_कांग्रेस pic.twitter.com/zgVu30xPbQ
— Priyanka Gandhi Vadra (@priyankagandhi) November 1, 2022
ಪ್ರಿಯಾಂಕಾ ಗಾಂಧಿ ( PRIYANKA GANDHI ) ರಾಜ್ಯದಲ್ಲಿ ಹಲವಾರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು ಮತ್ತು ರೋಡ್ ಶೋ ನಡೆಸಿದರು. ಅವರ ಆಯ್ಕೆಯಂತೆ ರಾಜೀವ್ ಶುಕ್ಲಾ ಅವರನ್ನು ಹಿಮಾಚಲ ಪ್ರದೇಶದ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ವೀರಭದ್ರ ಸಿಂಗ್ ಅವರಂತಹ ಧೀಮಂತ ನಾಯಕರ ನಿಧನದ ನಂತರ ಕಾಂಗ್ರೆಸ್ ಪಕ್ಷವು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವಾಗ ಉಸ್ತುವಾರಿಯೊಂದಿಗೆ ಸೂಕ್ಷ್ಮವಾಗಿ ಕಾರ್ಯತಂತ್ರವನ್ನು ರೂಪಿಸಿತ್ತು.
ಇದನ್ನು ಓದಿ : – Gujarat Election Results- ಗುಜರಾತ್ ನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ, ಕಾಂಗ್ರೆಸ್ ದಾಖಲೆ ಪುಡಿಪುಡಿ