ದೊಡ್ಮನೆ ಕುಡಿಯಾದ ಯುವ ರಾಜ್ ಕುಮಾರ್ (Yuva rajkumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಅಭಿಮಾನಿ (Fan) ಗಳ ಮನದಾಸೆಯಂತೆ ಸಂತೋಷ್ ಆನಂದ್ ರಾಮ್ (Santhosh anandram) ಮತ್ತು ಯುವ ಕಾಂಬಿನೇಷನ್ ನಲ್ಲಿ ಸಿನಿಮಾ ಬರೋದು ಈ ಹಿಂದೆಯೇ ಅಧಿಕೃತವಾಗಿದೆ. ಈ ಚಿತ್ರದ ಬಗ್ಗೆ ಏನು ಅಪ್ ಡೇಟ್ ಸಿಗದೇ ನಿರಾಸೆಯಾಗಿದ್ದ ಫ್ಯಾನ್ಸ್ ಗೆ ಇದೀಗ ಗುಡ್ ನ್ಯೂಸ್ ವೊಂದು ಸಿಕ್ಕಿದೆ.
`ಯುವ ರಣಧೀರ ಕಂಠೀರವ’ ಚಿತ್ರದ ಮೂಲಕ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ ಈ ಚಿತ್ರದ ಬದಲಾಗಿ ಯುವರತ್ನ ನಿರ್ದೇಶಕ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ಯುವ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾಗೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ಕೊಟ್ಟಿದೆ. ಕಳೆದ ಏಪ್ರಿಲ್ ಯುವನ ಭರ್ಜರಿ ಫೋಟೋಶೂಟ್ ಮಾಡಿಸಿ ಅಧಿಕೃತ ಅನೌನ್ಸ್ ಕೂಡ ಮಾಡಿದ್ರು. ಬಳಿಕ ಈ ಚಿತ್ರದ ಯಾವುದೇ ಅಪ್ ಡೇಟ್ ಕೂಡ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈಗ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪುನೀತ್ ರಾಜ್ಕ್ ಕುಮಾರ್ ಹೊಂಬಾಳೆ ಬ್ಯಾನರ್ ಅಡಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದರು. ಮತ್ತೆ ಮುಂಬರುವ ಪ್ರಾಜೆಕ್ಟ್ ಗಳನ್ನ ಹೊಂಬಾಳೆ ಜೊತೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಅಪ್ಪು ಅಗಲಿಕೆ ನಂತರ ಎಲ್ಲಾ ತಲೆಕೆಳಗಾಗಿತ್ತು. ಹೊಂಬಾಳೆ ನಿರ್ಮಾಣ ಸಂಸ್ಥೆ, ಸಂತೋಷ್ ನಿರ್ದೇಶನದಲ್ಲಿ ಯುವಗೆ ಡೈರೆಕ್ಷನ್ ಮಾಡಬೇಕು ಎಂಬುದು ಅಭಿಮಾನಿಗಳ ಬೇಡಿಕೆಯ ಜೊತೆಗೆ ಮಹಾದಾಸೆಯಾಗಿತ್ತು. ಅದರಂತೆಯೇ ಚಿತ್ರದ ಅನೌನ್ಸ್ ಮೆಂಟ್ ಕೂಡ ನಡೆದಿತ್ತು. ಇದನ್ನೂ ಓದಿ : – ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
ಅನೌನ್ಸ್ ಮೆಂಟ್ ನಂತರ ಚಿತ್ರದ ಬಗ್ಗೆ ಏನು ಅಪ್ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್ ಗೆ ನಿರ್ದೇಶಕ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ. ನನ್ನ ಸಹೋದರ ಸಮಾನರಾದ ಎಲ್ಲಾ ಅಭಿಮಾನಿಗಳಿಗೆ ಅತೀ ಶೀಘ್ರದಲ್ಲಿ ನನ್ನ ಮತ್ತು ಯುವ ರಾಜ್ ಕುಮಾರ್ ಕಾಂಬಿನೇಷನ್ ಚಿತ್ರದ ಎಲ್ಲಾ ಮಾಹಿತಿ ಹೊರಬರುತ್ತದೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಚಿತ್ರದ ಅಪ್ಡೇಟ್ ಸಿಗಲಿದೆ ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : – ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ..!