ಪಾತ್ರಾ ಚಾವ್ಲ್ (Partha chavla) ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (Shivasena) ಸಂಸದ ಸಂಜಯ್ ರಾವತ್ (Sanjay rawat) ಅವರನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ (ED) ಮುಂಬಯಿ ನ್ಯಾಯಾಲಯಕ್ಕೆ ಹಾಜರುಪಡಿಸಿ. ವಿಚಾರಣೆಗಾಗಿ ಸಂಜಯ್ ರಾವತ್ ಅವರನ್ನು 8 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯವು ನ್ಯಾಯಾಲಯವನ್ನುಕೋರಿತ್ತು.
ಆದರೆ ಕೋರ್ಟ್ ಸಂಜಯ್ ರಾವತ್ ಅವರನ್ನು ಆಗಸ್ಟ್ 4ರವರೆಗೆ ED ಕಸ್ಟಡಿಗೆ ಒಪ್ಪಿಸಿದೆ.ಶಿವಸೇನಾ ಸಂಸದ ಸಂಜಯ್ ರಾವತ್ ನಿವಾಸದ ಮೇಲೆ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಂಜೆ ವೇಳೆ ಅವರನ್ನು ವಶಕ್ಕೆ ಪಡೆದಿದ್ದರು. ಎರಡು ಬಾರಿ ಸಮನ್ಸ್ ನೀಡಿದ್ದರೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ರಾವತ್ ಅವರ ಮನೆಗೆ ತೆರಳಿದ ಅಧಿಕಾರಿಗಳು, ದಿನದ ಬಹುತೇಕ ಸಮಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಇದೀಗ ಆಗಸ್ಟ್ 4ರವರೆಗೆ ಅಂದರೆ 3 ದಿನಗಳ ಕಾಲ ರಾವತ್ ಅವರನ್ನು ED ಕಸ್ಟಡಿಗೆ ತೆಗೆದುಕೊಂಡಿದೆ.
ಇದನ್ನು ಓದಿ :- ಸಂಜಯ್ ರಾವತ್ ಬಂಧನ – ಸಂಸತ್ತಿನಲ್ಲಿ ವಿಪಕ್ಷಗಳಿಂದ ಭಾರಿ ಗದ್ದಲ, ಕಲಾಪ ಮುಂದೂಡಿಕೆ