ಸಿದ್ದರಾಮಯ್ಯನವರಿಗೆ ನಾಚಿಕೆ ಅಗ್ಬೇಕು – ಬೆಂಗಳೂರಿನಲ್ಲಿ ಗುಡುಗಿದ ಕುಮಾರಸ್ವಾಮಿ

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Kumraswamy) ಕಿಡಿ ಕಾರಿದ್ದಾರೆ. ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಸಿದ್ದರಾಮಯ್ಯನವರಿಗೆ ನಾಚಿಕೆ ಅಗ್ಬೇಕು ಅಂತ ಹೇಳಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೇನೆ. ಹೊಸ ಅಧ್ಯಾಯ ಪ್ರಾರಂಭ ಮಾಡೋಕೆ ನಿಮಗೆ ಇಷ್ಟ ಇದ್ರೆ ನಾನು ಚರ್ಚೆಗೆ ಸಿದ್ದ ಅಂತಾ ಹೇಳ್ತಾ ಇದ್ದೇನೆ. ಹಾಗಂತಾ ಅದು ನನ್ನ ವೀಕ್ನೆಸ್ ಅಂದುಕೊಳ್ಳಬೇಡಿ ಎಂದು ಹೆಚ್ಡಿಕೆ ಗುಡುಗಿದ್ದಾರೆ. ನಿಮ್ಮ ಅಭ್ಯರ್ಥಿ ವಾಪಸ್ ಪಡೆಯಿರಿ ಅಂದ್ರೆ, ನಾವೇನೂ ನಿಮ್ಮ ಅಡಿಯಾಳುಗಳಾ? ಬೇಷರತ್ತಾಗಿ ಸಿಎಂ ಮಾಡಿರಲಿಲ್ಲವೇ ಅಂತೀರಲ್ಲ. ಬೇಷರತ್ತು ಅಂದ್ರೆ ನಿಮ್ಮ ಪ್ರಕಾರ ಏನು.? ನೀವು ಬಂದು ನನ್ನ ಸಿಎಂ ಮಾಡ್ತೀನಿ ಅಂತಾ ಹೇಳಿದ್ದು. ಅವತ್ತು ಬಿಜೆಪಿಯಿಂದಲೂ ನಮಗೆ ಆಫರ್ ಇತ್ತು. ನೀವು ನಮ್ಮ ಮನೆಗೆ ಬಂದು ಕೇಳಿದ್ದು. ಅವತ್ತೂ ದೇವೇಗೌಡರು ನಮಗೆ ಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇಲ್ಲ , ನೀವೇ ಆಗಿ ಅಂತಾ ಹೇಳಿದ್ರು. ಕ್ಯಾಬಿನೆಟ್ ದರ್ಜೆಯ ಸಚಿವರ ಇಷ್ಟೇ ಸ್ಥಾನ ಬೇಕು, ಇಂತದ್ದೇ ಖಾತೆ ಬೇಕು ಅಂತಾ ಕೇಳಿ ಕೇಳಿ ತೆಗೆದುಕೊಂಡ್ರಿ. ಇದನ್ನೂ ಓದಿ : – ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್ ಪಕ್ಷ ಸದಾಕಾಲ ಇದೆ ಇರತ್ತೆ – ಎಚ್.ಕೆ.ಪಾಟೀಲ್

ನಿಮ್ಮ ನಿಮ್ಮ ಇಲಾಖೆಗೆ ನೀವು ಕೇಳಿದ್ದ ಅಧಿಕಾರಿಗಳನ್ನೇ ಹಾಕಿಸಿಕೊಂಡ್ರಿ. ನಿಮಗೆ ಬೇಕಾದಂತೆ ಆಡಿದ್ರಿ ಎಂದು ಕಾಂಗ್ರೆಸ್ ನಾಯಕರ ಮೇಲೆ ಎಚ್ಡಿಕೆ ಗುಡುಗಿದ್ದಾರೆ.ಸಿದ್ದರಾಮಯ್ಯನವರಿಗೆ ನಾಚಿಕೆ ಆಗಬೇಕು. ಯಾವ ನೈತಿಕತೆ ಇಟ್ಟುಕೊಂಡು ಆ ಪತ್ರ ಬರೀ ತೀರಾ? ಆತ್ಮಸಾಕ್ಷಿ ಅಂದ್ರೆ ಏನು.? ಅವತ್ತು ನಮ್ಮನ್ನು ಬಿಜೆಪಿ ಬಿ ಟೀಂ ಅಂದ್ರಲ್ಲಾ ? ಈಗ ನಾವು ಸೆಕ್ಯುಲರಾ ಅಂತ ಪ್ರಶ್ನಿಸಿದ್ರು ? ಕಿಶನ್ ರೆಡ್ಡಿ ಅಲ್ಲಿದ್ರಾ..? ನಾನ್ಯಾಕೆ ಅವರನ್ನ ಭೇಟಿ ಮಾಡಲಿ. ನನಗೇನೂ ಗೊತ್ತಿಲ್ಲ ಎಂದು ಗುಡುಗಿದ್ರು. ನನ್ನ ಪ್ರಕಾರ 2023 ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆ ಆಗುತ್ತೆ. ಈಗಿನಿಂದಲೇ ಸರಿ ಪಡಿಸಿಕೊಳ್ಳಲಿಲ್ಲ ಅಂದ್ರೆ ಕಾಂಗ್ರೆಸ್ ಕರ್ನಾಟಕದಲ್ಲಿ ಇರಲ್ಲ ಎಂದ ಹೆಚ್ಡಿಕೆ ಭವಿಷ್ಯ ನುಡಿದ್ರು. ಇದನ್ನೂ ಓದಿ : – ನನಗೆ ಜೆಡಿಎಸ್ ನಿಂದ ಮತದಾನ ಮಾಡಲು ಕರೆ ಬಂದಿಲ್ಲ- ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ–ಶಾಸಕ ಎಸ್ .ಆರ್ . ಶ್ರೀನಿವಾಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!