ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ್ ಖರ್ಗೆ (Mallikharjun kharge) ಅವರಿಗೆ 75 ವರ್ಷ ವಯಸ್ಸಾಗಿದೆ ಅಧಿಕಾರ ಬಿಟ್ಟು ಕೊಡಬೇಕು. ಯಡಿಯೂರಪ್ಪ ಅವರು ಪಕ್ಷದಲ್ಲಿದ್ದಾರೆ ಆದರೆ ಅಧಿಕಾರದಲ್ಲಿಲ್ಲ ಧಾರವಾಡ ಸಚಿವ ಅಶ್ವಥ್ ನಾರಾಯಣ್ (Ashwath narayan) ಹೇಳಿದ್ದಾರೆ. 75 ವರ್ಷ ದಾಟಿದವರು ಕಿರಿಯರಿಗೆ ಅವಕಾಶ ಮಾಡಿಕೊಡಬೇಕು.
ಹಿಂದೆ ಸಿದ್ದರಾಮಯ್ಯ (Siddaramaiah) ಸಿಎಂ ಅವಧಿ ಮುಗಿದ ಮೇಲೆ ನಿವೃತ್ತಿ ಯಾಗುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿದ್ರು. ಅಧಿಕಾರದ ರುಚಿ ನೊಡಿದ್ದಾರೆ, ಅಧಿಕಾರದಲ್ಲಿರಬೇಕೆಂದು ಸಿದ್ದರಾಮಯ್ಯಗೆ ಆಸೆ ಇದೆ. ಅದಕ್ಕೆ ಅವರು ಅಧಿಕಾರ ಬಿಟ್ಟುಕೊಡುತ್ತಿಲ್ಲ. ಕಾಂಗ್ರೆಸ್ (Congress) ಪಕ್ಷ ಇಲ್ಲಿಯವರೆಗೆ ಸ್ಪಷ್ಟವಾದ ನಿಲುವು ಇಟ್ಟುಕ್ಕೊಂಡಿಲ್ಲ. ಸಮಾಜ ಒಡೆಯುವ ಕೆಲಸ ಮಾಡುತ್ತಿದೆಣ ಧರ್ಮ ಆಚರಣೆ, ಭಾವನೆಗಳನ್ನ ಗೌರವಿಸುತ್ತಿಲ್ಲ. ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಕಂಟಕವಾಗಿ ಪರಿಣಮಿಸಿದೆ. ತಮ್ಮ ಪಕ್ಷದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಅವಲೋಕನ ಮಾಡಿಕ್ಕೊಳ್ಳಬೇಕು. ಜನರು ಇಂತವರಿಗೆ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ : – ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದ ಹೆಚ್.ಡಿ ಕುಮಾರಸ್ವಾಮಿ
ಗುಜರಾತ್ (Gujrath) ಮಾದರಿಯಲ್ಲಿ ರಾಜ್ಯದಲ್ಲೂ ಹಿರಿಯ ಶಾಸಕರಿಗೆ ಟಿಕೆಟ್ ನಿಡುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಎಲ್ಲವನ್ನ ತಿರ್ಮಾನ ಮಾಡುತ್ತೆ. ಸಮಯ ಬಂದಂಗೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಒಟ್ಟಾರೆ ಸಮಾಜಕ್ಕೆ ಒಳ್ಳೆಯದಾಗುತ್ತೆ. ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ರಾಜ್ಯದಲ್ಲಿ ನಡಿಯಲ್ಲ. ಹಿರಿಯ ನಾಯಕರು ಎಲ್ಲರನ್ನೂ ವಿಶ್ವಾಸಕ್ಕೆ ಪಕ್ಷ ತೆಗೆದುಕ್ಕೊಳ್ಳುತ್ತೆ. ದೇಶದ ಪರವಾಗಿ ಪಕ್ಷದ ಪರವಾಗಿ ಬಿಜೆಪಿ ಕೆಲಸ ಮಾಡುತ್ತೆ ಎಂದು ಹೇಳಿದ್ರು.
ಇದನ್ನೂ ಓದಿ : – ಬಿಜೆಪಿ ಮತ್ತೆ ವಾಮ ಮಾರ್ಗವಾಗಿ ಅಧಿಕಾರಕ್ಕೆ ಬರಲು ಯತ್ನಿಸಿದೆ – ಎಂ. ಬಿ ಪಾಟೀಲ್