ಶ್ರೀನಿವಾಸಗೌಡ ನಡುವಳಿಕೆಯೆ ಸಿದ್ದರಾಮಯ್ಯಗೆ ಮುಳುವು ಆಗುತ್ತದೆ – ಸಿದ್ದರಾಮಯ್ಯ

ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Kumarswamy ) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಮುಂದಿನ ಚುನಾವಣೆ ಬಗ್ಗೆ ಲಗುವಾಗಿ ಮಾತನಾಡುವುದಿಲ್ಲ.

ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Kumarswamy ) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಮುಂದಿನ ಚುನಾವಣೆ ಬಗ್ಗೆ ಲಗುವಾಗಿ ಮಾತನಾಡುವುದಿಲ್ಲ. ಅವರು ಯಾವ ಕ್ಷೇತ್ರದಲ್ಲಿ ಆದ್ರು ನಿಲ್ಲಲ್ಲಿ . ಅವರು ಎಲ್ಲಿ ನಿಲ್ಲಬೇಕು ಎಂದು ಅವರ ಪಕ್ಷದವರು ತೀರ್ಮಾನ ಮಾಡುತ್ತಾರೆ. ಕೋಲಾರದಲ್ಲಿ ನಮ್ಮ ಅಭ್ಯರ್ಥಿಯು ಭಾರಿ ಸಮರ್ಥರು ಇದಾರೆ ಎಂದು ಹೇಳಿದ್ರು.

ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಗೆ ಸೇರ್ಪಡೆ ಆದ್ರೆ ಅದು ಸಿದ್ದರಾಮಯ್ಯಗೆ ಪ್ಲಸ್ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಆ ವ್ಯಕ್ತಿ ನಡುವಳಿಕೆಯಿಂದಲೇ ಸಿದ್ದರಾಮಯ್ಯನವರಿಗೆ ಮುಳುವು ಆಗುತ್ತದೆ. ನಳಿನ್ ಕುಮಾರ್ ಕಟೀಲ್ ಅವರು ಮಂಡ್ಯದಲ್ಲಿ ಕಾಲಿ ಖುರ್ಚಿಗಳ ಮುಂದೆ ಮಂಡ್ಯ ಜಿಲ್ಲೆಯನ್ನು JDS ಮುಕ್ತ ಮಾಡುತ್ತೇವೆ ಎಂದು ಹೇಳಿದ್ದಾರಂತೆ ಅವರು ಏನೋ ಹೇಳ್ತಾರೆ ಆದ್ರೆ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಶಿರಾ ತಾಲೂಕಿನ ಹಳೆ ಮುಖಂಡರು. ಇದೆ ಪಕ್ಷದಲ್ಲಿದ್ದವರು ಬೇರೆ ಪಕ್ಷಕ್ಕೆ ಹೋಗಿದ್ರು. ಗ್ರಾಮಪಂಚಾಯತಿ ಸದಸ್ಯರು , ತಾಲೂಕು ಪಂಚಾಯತಿ ಸದಸ್ಯರು ಮರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಹನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 150 ಜನ ಪಕ್ಷ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ರು. ಈಗಾಗಲೇ ಕಲ್ಯಾಣ ಕರ್ನಾಟಕ, ಚಿಕ್ಕಮಗಳೂರಿನಲ್ಲಿ ನಮ್ಮ ಅಭ್ಯರ್ಥಿಗಳು ಕಾರ್ಯ ಆರಂಭಿಸಿದ್ದಾರೆ. ಪಂಚರತ್ನ ಕಾರ್ಯಕ್ರಮವನ್ನು 18 , 20 ಕ್ಕೆ ನಿಗದಿ ಮಾಡುತ್ತೇವೆ. ಡಿಸೆಂಬರ್ 29ರ ವರೆಗೂ ಮುಂದುವರೆಸುತ್ತೇವೆ. 2ನೇ ಹಂತದ ಕಾರ್ಯಕ್ರಮ ಜನವರಿಯಿಂದ ಆರಂಭವಾಗುತ್ತದೆ.ಮಾರ್ಚ 15 ಕನಿಷ್ಟ 150 ಕ್ಷೇತ್ರ ಮುಟ್ಟುವ ಗುರಿಯಿದೆ ಎಂದು ತಿಳಿಸಿದರು.
ದೇವೆಗೌಡ (Devegowda) ರನ್ನು ಕೆಂಪೇಗೌಡ ಪ್ರತಿಮೆ (Kempegowda statue) ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ತಪ್ಪು ಯಾರದು ರಾತ್ರಿ 12 ಗಂಟೆಗೆ ಪತ್ರ ಕಳಿಸಿದ್ದಾರೆ. ಇನ್ವಿಟೇಷನ್ ನಲ್ಲಿ ಹೆಸರು ಇಲ್ಲ. ವೇದಿಕೆಯಲ್ಲಿ ಅವರಿಗೆ ಕುಳಿತು ಕೊಳ್ಳುವ ಜಾಗವಿಲ್ಲ ಎಂದು ಹೇಳಿದ್ರು. ಸರ್ಕಾರದ ದುಡ್ಡು ಬಿಜೆಪಿಯ ಕಾರ್ಯಕ್ರಮ. ಇದನ್ನೂ ಓದಿ : –  ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಗಂಡನೊಂದಿಗೆ ಪತ್ನಿ ಜಗಳ – ಮನನೊಂದು ತಾಯಿ-ಮಗ ಆತ್ಮಹತ್ಯೆ

ವಾಲ್ಮೀಕಿ ಪ್ರತಿಮೆಗೆ ಹೋದ್ರು ಪುಷ್ಪಾರ್ಚನೆ ಮಾಡಿದ್ರು. ಯಾರಿಗಾದ್ರು ಏನ್ ಆದ್ರು ಕೊಟ್ರಾ. ದುಡ್ಡು ಹೊಡೆಯುವ ಡಬಲ್ ಇಂಜಿನ್ ಸರ್ಕಾರ. ದುಡ್ಡು ಹೊಡೆಯುವುದು ದೆಹಲಿಗೆ ತೆಗುದುಕೊಂಡು ಹೋಗುವುದು. 2006ರಲ್ಲಿ ಬಿಜೆಪಿಯಲ್ಲಿ ಯಾವುದೇ ತೀರ್ಮಾನಗಳು ರಾಜ್ಯದಲ್ಲಿಯೇ ಆಗ್ತಾ ಇದ್ದವು. ಈಗಾ ದೆಹಲಿಯಲ್ಲಿ ತೀರ್ಮಾನ ಆಗುತ್ತವೆ. ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿದ್ರೆ ಜನ ಎಲ್ಲಾ ಬಂದು ಬಿಡ್ತಾರಾ. ನಾನು ಹಲವಾರು ಕಡೆ ಪ್ರತಿಮೆ ಅನಾವರಣ ಮಾಡಿದ್ದೇನೆ .ಹಾಗಂತ ನನ್ನ ಹಿಂದೆ ಎಲ್ಲರೂ ಬಂದ್ರಾ . ಪ್ರತಿಮೆ ಅನಾವರಣ ಮಾಡಿದ್ರೆ ಜನ ಬರ್ತಾರೆ ಅನ್ನುವುದು ಸುಳ್ಳು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : – ಇಂಗ್ಲೆಂಡ್‌ ಎದುರು ಮಂಡಿಯೂರಿದ ಪಾಕಿಸ್ತಾನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!