ಗೊಲ್ ಗುಂಬಜ್ (Gol gumbaz) ಮಾದರಿಯ ಬಸ್ ನಿಲ್ದಾಣ (Bus stand) ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ (Pratap simha) ಹೇಳಿಕೆಗೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾಜಿ ಸಚಿವೆ, ಸಾಹಿತಿ ಬಿ.ಟಿ ಲಲಿತಾ ನಾಯಕ್ (BT.Lalitha nayak) ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್ ಸಿಂಹ ಅವರ ಅಪ್ಪ- ಅಮ್ಮ ಕಟ್ಟಿಸಿದ್ರೆ ಅವರು ಅವುಗಳನ್ನು ಒಡೆಯಲಿ.
ಅದು ಸರ್ಕಾರ ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಸ್ವತ್ತು ಗುಂಬಜ್ ಎಲ್ಲಾ ಕಡೆ ಇದೆ . ಹಾಗಾದ್ರೆ ಪ್ರತಾಪ್ ಸಿಂಹ ವಿಧಾನ ಸೌಧ ಒಡೆಯುತ್ತಾರಾ-? ಗುಂಬಜ್ ಮುಸ್ಲಿಂರ ಸಂಕೇತ ಅಂತಾರೆ ಅವರು ಅದನ್ನು ಒಡೆದು ಹಾಕಿದ್ರೆ ನಾವು ಪ್ರತಿಭಟನೆ ಮಾಡ್ತೇವೆ. ವಿರೋಧ ಮಾಡ್ತೇವೆ . ರಾಜ್ಯದಲ್ಲಿರೋ ಸರ್ಕಾರ RSS ನ ಕೈಗೊಂಬೆಯಾಗಿದೆ. ಅವರು ಹೇಳಿದಂತೆ ಕೇಳ್ತಿದೆ ಈ ಸರ್ಕಾರ . ಹಿಂದೂಗಳನ್ನು ಮುಸ್ಲಿಂರ ಮೇಲೆ ಎತ್ತಿಕಟ್ಟೋ ಕೆಲಸ ಮಾಡುತ್ತಿದೆ . ರಾಜ್ಯ ಮತ್ತು ಕೇಂದ್ರ ಸರ್ಕಾರಗಳು RSS ನಾಯಕರು ಹೇಳಿದ ಹಾಗೆ ಕೇಳ್ತಿವೆ ಶಾಲೆಗಳಿಗೆ ವೀವೇಕ ಬಣ್ಣ ಹಚ್ಚೋ ಹೆಸರಲ್ಲಿ ಏನೋ ಮಾಡಲು ಹೊರಟಿದ್ದಾರೆ. ಇದನ್ನೂ ಓದಿ : – ಮದುವೆ ಡೇಟ್ ಅನೌನ್ಸ್ ಮಾಡಿದ ನಟಿ ಕಿಯಾರಾ ಅಡ್ವಾಣಿ…!
ಸಚಿವ ಆನಂದ್ ಸಿಂಗ್ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಮೊದಲು ವಿಜಯನಗರ ಜಿಲ್ಲೆಯ ಜನರ ಕೆಲಸ ಮಾಡಬೇಕಿದೆ. ಆ ಬಳಿಕ ಅವರ ವೈಯಕ್ತಿಕ ಕೆಲಸ ಮಾಡಿಕೊಳ್ಳಲಿ . ಹೊಸಪೇಟೆಯಲ್ಲಿರೋ ಏಕೈಕ ಕ್ರೀಡಾಂಗಣದಲ್ಲಿ ಧ್ಚಜ ಸ್ತಂಭ ನಿರ್ಮಾಣ ಮಾಡಲಾಗಿದೆ. ಈ ಕೂಡಲೇ ಸಚಿವ ಆನಂದ್ ಸಿಂಗ್ (Anand singh) ಧ್ವಜ ಸ್ತಂಭ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : – ಸೈಲೆಂಟ್ ಸುನೀಲ್ ಬೆನ್ನಲ್ಲೇ ಮತ್ತೊಬ್ಬ ರೌಡಿಶೀಟರ್ ಬಿಜೆಪಿ ಸೇರ್ಪಡೆ