ಕಾಂಗ್ರೆಸ್ (Congress) ಪಕ್ಷಕ್ಕೊಂದು ಇತಿಹಾಸ ಇದೆ. ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK.Shivkumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮಗೊಂದು ಗುರಿ ಇರಬೇಕು. ನಾನು ಇಲ್ಲಿ ಯಾರ ಬಗ್ಗೆನೂ ಟೀಕೆ ಮಾಡೋಕೆ ಬಂದಿಲ್ಲ ಎಂದು ತಿಳಿಸಿದ್ರು.
ಪ್ರತಿ ಮನೆಯಲ್ಲಿ ಎಷ್ಟು ನಿರುದ್ಯೋಗಿ (Unemployment) ಗಳು ಇದ್ದಾರೆ ಅನ್ನೋ ಡೇಟಾ ತೆಗೆದುಕೊಳ್ಳಬೇಕು. ಜನರ ಬಳಿ ಹೋಗಲು ನಿಮಗೆ ಒಂದು ಅವಕಾಶ ಸಿಗುತ್ತೆ. ಪ್ರತಿ ಗ್ರಾಮದಲ್ಲಿ ತಂಡ ಕಟ್ಟಿಕೊಂಡು ಈ ಕೆಲಸ ಮಾಡಬೇಕು. ರಾಷ್ಟ್ರ ಧ್ವಜ ಹಿಡಿದು ಮಾರ್ಚ್ ಮಾಡಬೇಕು. ಬಸವನಗುಡಿ ಮೈದಾನ (Basavanagudi ground) ದಲ್ಲಿ ಸಭೆ ಮಾಡಲು ತಯಾರಿ ಮಾಡಿದ್ದೇವೆ. ಅಲ್ಲಿ ಇನ್ನು ಅನುಮತಿ ಕೊಟ್ಟಿಲ್ಲ ನಾಳೆ ಸಿಎಂ ಬೊಮ್ಮಾಯಿ (Bommai) ಹತ್ರ ಅನುಮತಿ ಕೇಳಲು ಹೋಗ್ತೀನಿ. ನಾನು ಕನಿಷ್ಠ 75 ಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯ ಮಾಡುತ್ತೇನೆ. ಮೊದಲು ವ್ಯಕ್ತಿ ಪೂಜೆ ಬಿಡಿ ನಾಯಕತ್ವ ಬೆಳೆಸಿಕೊಳ್ಳಿ ಎಂದು ಕರೆ ನೀಡಿದ್ರು. ಅಗಸ್ಟ್ 15ರ ಪಾದಯಾತ್ರೆಯಲ್ಲಿ ಕನಿಷ್ಠ 1 ಲಕ್ಷ ಜನ ಸೇರಬೇಕು ಎಂದು ತಿಳಿಸಿದ್ರು. ಇದನ್ನೂ ಓದಿ : – ನಾಳೆ ಚಾಮರಾಜಪೇಟೆ ಬಂದ್ ಹಿನ್ನೆಲೆ – ಬಿಗಿ ಬಂದೋಬಸ್ತ್ ಗೆ ಸೂಚನೆ – ಆರಗ ಜ್ಞಾನೇಂದ್ರ
ಉದ್ಯೋಗ ಸೃಷ್ಟಿಯ ಹಗರಣದಲ್ಲಿ ಪಿ ಎಸ್ ಐ (PSI) ಪ್ರಕರಣದ ಮಾರ್ಕ್ಸ್ ಶಿಟ್ ನಲ್ಲಿ ತಿದ್ದುಪಡಿ ಮಾಡಿದ್ದಾರೆ. ಒಬ್ಬ ಡಿಜಿಪಿ ಅಧಿಕಾರಿ ಕಚೇರಿಯಲ್ಲಿ ಎಲ್ಲಿಯಾದ್ರೂ ಇಂತಹ ಪ್ರಕರಣ ನೋಡಿದ್ದಿರಾ ಎಂದು ಕೇಳಿದ್ರು. ಇದನ್ನೂ ಓದಿ : – ನೂತನ ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ