ಸ್ವಾಮಿಗಳು ಆಧ್ಯಾತ್ಮದತ್ತ ಗಮನ ಹರಿಸಬೇಕು – ಮುರಘಾ ಶರಣರಿಗೆ ಎಸ್. ಆರ್ ಹಿರೇಮಠ್ ಟಾಂಗ್

ಮುರುಘಾ ಶರಣ (Murugha sharana) ರ ವಿರುದ್ಧ ಪೋಕ್ಸೋ ಪ್ರಕರಣ ಕುರಿತಂತೆ ಧಾರವಾಡದಲ್ಲಿ ಮಾತನಾಡಿದ ಎಸ್.ಆರ್. ಹಿರೇಮಠ್ (Sr . hiremath) 2-3 ದಶಕಗಳಲ್ಲಿ ಸ್ವಾಮಿಗಳು, ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ ನಡೆಯುತ್ತಿದೆ. ಇದು ವಿಪರ್ಯಾಸದ ಸಂಗತಿ. ಇದು ಒಳ್ಳೆ ಬೆಳವಣಿಗೆ ಅಲ್ಲ.

ಸಂವಿಧಾನದ ಮೌಲ್ಯಗಳಿಗೆ ಇದು ಅಪಾಯಕಾರಿ. ಇಂಥ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ಪೊಲೀಸರು ತಡವಾಗಿ ಸ್ವಾಮೀಜಿ ಬಂಧಿಸಿದರು. ಇಂಥ ಲೋಪಗಳು ಆಗಬಾರದು. ಸ್ವಾಮಿಗಳು ಆಧ್ಯಾತ್ಮದತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜಕಾರಣದ ಬಗ್ಗೆ ಕೆಲಸ ಮಾಡಬಾರದು ಎಂದು ಹೇಳಿದ್ರು.
12 ನೇ ಶತತಮಾನದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಶರಣರು ಯತ್ನಿಸಿದರು. ಶರಣರು ಸಾಕಷ್ಟು ಕೆಲಸ ಮಾಡಿದ್ದಾರೆ. ಬಸವ ಪ್ರಶಸ್ತಿ ಘೋಷಿಸಿದ್ದು ಇದೇ ಮುರುಘಾಮಠ. ಆದರೆ ಇವತ್ತು ಅಲ್ಲಿ ಇಂಥ ಕೆಲಸ ನಡೆದಿದೆ. ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಬಿಡಬೇಕು ಎಂದು ಹೇಳಿದ್ರು. ಮಾಜಿ ಸಿಎಂ ಬಿ.ಎಸ್.ವೈ. ನಾಚಿಕೆ ಇಲ್ಲದೇ ಎಲ್ಲಾ ಮಠಗಳಿಗೆ ಅನುದಾನ ಕೊಟ್ಟಿದ್ದಾರೆ. ಇದು ಮಾಡಬಾರದ ಮಹಾಪರಾಧ ಎಂದು ಹೇಳಿದ್ರು.

ಇದನ್ನೂ ಓದಿ : –  ಲಡಾಖ್ ನ ಗೋಗ್ರಾ ಪ್ರದೇಶದಿಂದ ತಮ್ಮ ಸೇನೆಗಳನ್ನು ಹಿಂಪಡೆದ ಭಾರತ-ಚೀನಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!