ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಬೇರೆ. ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ ರೌಡಿ. ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ( K.R PETE ) ಹೆಲಿಪ್ಯಾಡ್ ನಲ್ಲಿ ಸಿದ್ದರಾಮಯ್ಯ ( SIDDARAMAIAH )ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸುನಿಲ್ ( SUNILA )ಒಬ್ಬ ಸರ್ಚ್ ವಾರೆಂಟ್ ನಲ್ಲಿ ಇರೋ ರೌಡಿ. ಅಂತಹವನ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿನಾ..? ಅದಕ್ಕೆ ಕಾಂಗ್ರೆಸ್ಸಿನಲ್ಲಿದ್ದಾರೆ ನೋಡಿ ಅಂತಂದ್ರೆ ಎಷ್ಟು ಸರಿ..? ಬಿಜೆಪಿಯವರಿಗೆ ಅದೊಂದು ಅಂಟು ರೋಗ ಅಂಟಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿ. ಹಿಂದಿನ ಅಧಿಕಾರದಲ್ಲಿ. ಕಾಂಗ್ರೆಸ್ಸಿನಲ್ಲಿ ಅಂತಾ ಎಲ್ಲದಕ್ಕೂ ಬೊಟ್ಟು ಮಾಡ್ತಾರೆ. ಮೊದಲು ನಿಮ್ಮ ತಪ್ಪುಗಳ ಹೇಳ್ರಯ್ಯ..? ನೀವೇನು ಮಾಡಿದ್ರಿ. ನಿಮ್ಮ ತಪ್ಪೇನು ಅಂತಾ ಹೇಳಿ. ಆ ರೌಡಿ ಶೀಟರ್ ಫೈಟರ್ ರವಿ ಹೆಸರಲ್ಲೇ ಅವನ ಬಗ್ಗೆ ಗೊತ್ತಾಗುತ್ತದೆ. ಅಶಾಂತಿ ನಿರ್ಮಾಣ ಮಾಡಲು ಇಂತಹವರು ಬೇಕಲ್ಲ ಅವರಿಗೆ. ಇದನ್ನೂ ಓದಿ : – ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ HDK ಪಂಚರತ್ನ ರಥಯಾತ್ರೆ
ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅಮಿತ್ ಶಾ ಎಲ್ಲೋಗಿದ್ರು..? ಅಮಿತ್ ಶಾ ( AMITH SHASH ) ಏನು ಮಾವನ ಮನೆಗೆ ಹೋಗಿದ್ರ..? ಗಡಿಪಾರು ಮಾಡಿದ್ರು ಅವರನ್ನ. ಈ ದೇಶದ ಹೋಂ ಮಿನಿಸ್ಟರ್ ಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅಂತಹವರೇ ಈ ದೇಶದ ಹೋಂ ಮಿನಿಸ್ಟರ್ ಆಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿರಲಿಲ್ಲವ.. ? ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತು ಅಷ್ಟೇ. ನಲಪಾಡ್ ರೌಡಿ ಅಲ್ಲ, ರೌಡಿ ಶೇಖರ್ ಕೂಡ ಅಲ್ಲ. ಕೇಸ್ ಪ್ರೂವ್ ಆಗಿ ಶಿಕ್ಷೆ ಆಗಿದ್ರೆ ಓಕೆ. ಬಿಜೆಪಿಯವರದ್ದು ಮೊಂಡತನ, ಭಂಡತನ. ಮಾನ ಮರ್ಯಾದೆ ಇಲ್ದೆ ಇರೋರಿಗೆ ಹಿಂಗೇ ಆಗೋದು ಎಂದು ಬಿಜೆಪಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ : – ರೌಡಿಗಳನ್ನು ಈ ದೇಶಕ್ಕೆ ಪರಿಚಯ ಮಾಡಿದ್ದೇ ಕಾಂಗ್ರೆಸ್ – ಡಾ.ಕೆ ಸುಧಾಕರ್