ಕಾಂಗ್ರೆಸ್ – ಬಿಜೆಪಿ ಯಾತ್ರೆಗಳ ಬಗ್ಗೆ ನಾನು ಮಾತಾಡಲ್ಲ – ನಿಖಿಲ್ ಕುಮಾರಸ್ವಾಮಿ

ಕುಮಾರಸ್ವಾಮಿ ಅವರ ರಾಜಕೀಯ ಅನುಭವದ ಮೇಲೆ ಪಂಚರತ್ನ ಯಾತ್ರೆ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಭಾಗಿ ಸಾಧ್ಯತೆ ಇದೆ

ಕುಮಾರಸ್ವಾಮಿ ಅವರ ರಾಜಕೀಯ ಅನುಭವದ ಮೇಲೆ ಪಂಚರತ್ನ ಯಾತ್ರೆ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಭಾಗಿ ಸಾಧ್ಯತೆ ಇದೆ ಎಂದು ಮುಳಬಾಗಿಲಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ( nikil kumarswamy ) ಹೇಳಿದ್ದಾರೆ.

ಮುಳಬಾಗಿಲು ನಗರದ ಹೊರವಲಯದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಸಿದ್ದತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಯಾತ್ರೆ ಗಳ ಬಗ್ಗೆ ನಾನು ಮಾತಾಡಲ್ಲ. ಪಂಚರತ್ನ ( pancharathna ) ಯೋಜನೆಗಳನ್ನು ಕುಮಾರಸ್ವಾಮಿ ( kumaraswamy ) ಸರ್ಕಾರದಲ್ಲಿ ಜಾರಿಗೊಳಿಸ್ತೀವಿ. ಭೂಕುಸಿತದಿಂದ ಕೊಡುಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಮಾದರಿಯಾಗಿ ಮನೆ ನಿರ್ಮಾಣ ಮಾಡಲಾಗಿದೆ. ಮುಳಬಾಗಿಲು ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭ ವಿಶೇಷತೆಯಿಂದ ಕೂಡಿದೆ. ಇದನ್ನೂ ಓದಿ : – ದೇಶ ಕಂಡ ಭ್ರಷ್ಟ ಸರ್ಕಾರ ಅಂದ್ರೆ ಅದು ಬೊಮ್ಮಾಯಿ ಸರ್ಕಾರ – ಕಾಂಗ್ರೆಸ್ ಮುಖಂಡ ಮನೋಹರ್

ಮಾಜಿ ಪ್ರಧಾನಿ HD ದೇವೇಗೌಡರು 1994 ರಲ್ಲಿ ಇಲ್ಲಿಂದಲೇ ಚುನಾವಣಾ ಪ್ರಚಾರ ಕೈಗೊಂಡಿದ್ದರು. 1994 ರ ಚುನಾವಣೆಯಂತೆ 2023 ರ ಚುನಾವಣೆಯನ್ನ ಜೆಡಿಎಸ್ ಗೆಲ್ಲಲಿದೆ. ಜೆಡಿಎಸ್ ಎರಡಂಕಿ ದಾಟಲ್ಲ ಎನ್ನುವ ಬಿಜೆಪಿ ಆರೋಪದ ಬಗ್ಗೆ ನಾನು ಚರ್ಚೆ ಮಾಡೊಲ್ಲ. ಜೆಡಿಎಸ್ ಮಿಷನ್ 123 ಗುರಿಯನ್ನ ತುಲುಪಲಿದೆ ಎಂದು ಹೇಳಿದ್ರು.

ಇದನ್ನೂ ಓದಿ : – ಅಪ್ಪು ಪುಣ್ಯಸ್ಮರಣೆ ದಿನವೇ ಅಪ್ಪು ಅಭಿಮಾನಿ ಆತ್ಮಹತ್ಯೆ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!