ಕುಮಾರಸ್ವಾಮಿ ಅವರ ರಾಜಕೀಯ ಅನುಭವದ ಮೇಲೆ ಪಂಚರತ್ನ ಯಾತ್ರೆ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಭಾಗಿ ಸಾಧ್ಯತೆ ಇದೆ ಎಂದು ಮುಳಬಾಗಿಲಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ( nikil kumarswamy ) ಹೇಳಿದ್ದಾರೆ.
ಮುಳಬಾಗಿಲು ನಗರದ ಹೊರವಲಯದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಸಿದ್ದತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಯಾತ್ರೆ ಗಳ ಬಗ್ಗೆ ನಾನು ಮಾತಾಡಲ್ಲ. ಪಂಚರತ್ನ ( pancharathna ) ಯೋಜನೆಗಳನ್ನು ಕುಮಾರಸ್ವಾಮಿ ( kumaraswamy ) ಸರ್ಕಾರದಲ್ಲಿ ಜಾರಿಗೊಳಿಸ್ತೀವಿ. ಭೂಕುಸಿತದಿಂದ ಕೊಡುಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಮಾದರಿಯಾಗಿ ಮನೆ ನಿರ್ಮಾಣ ಮಾಡಲಾಗಿದೆ. ಮುಳಬಾಗಿಲು ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭ ವಿಶೇಷತೆಯಿಂದ ಕೂಡಿದೆ. ಇದನ್ನೂ ಓದಿ : – ದೇಶ ಕಂಡ ಭ್ರಷ್ಟ ಸರ್ಕಾರ ಅಂದ್ರೆ ಅದು ಬೊಮ್ಮಾಯಿ ಸರ್ಕಾರ – ಕಾಂಗ್ರೆಸ್ ಮುಖಂಡ ಮನೋಹರ್
ಮಾಜಿ ಪ್ರಧಾನಿ HD ದೇವೇಗೌಡರು 1994 ರಲ್ಲಿ ಇಲ್ಲಿಂದಲೇ ಚುನಾವಣಾ ಪ್ರಚಾರ ಕೈಗೊಂಡಿದ್ದರು. 1994 ರ ಚುನಾವಣೆಯಂತೆ 2023 ರ ಚುನಾವಣೆಯನ್ನ ಜೆಡಿಎಸ್ ಗೆಲ್ಲಲಿದೆ. ಜೆಡಿಎಸ್ ಎರಡಂಕಿ ದಾಟಲ್ಲ ಎನ್ನುವ ಬಿಜೆಪಿ ಆರೋಪದ ಬಗ್ಗೆ ನಾನು ಚರ್ಚೆ ಮಾಡೊಲ್ಲ. ಜೆಡಿಎಸ್ ಮಿಷನ್ 123 ಗುರಿಯನ್ನ ತುಲುಪಲಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಅಪ್ಪು ಪುಣ್ಯಸ್ಮರಣೆ ದಿನವೇ ಅಪ್ಪು ಅಭಿಮಾನಿ ಆತ್ಮಹತ್ಯೆ…!