ಹೊಸ ಸಮಿತಿ ರಚಿಸುವ ಪ್ರಶ್ನೆಯೇ ಇಲ್ಲ- ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ

ಪಠ್ಯ ವಿವಾದದ ಹಿನ್ನೆಲೆಯಲ್ಲಿ ಹೊಸ ಸಮಿತಿ ರಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ್ ( BASAVARAJ BOMMAI ) ಬೊಮ್ಮಾಯಿ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಹೊಸ ಸಮಿತಿ ರಚನೆ ಆಗುವ ಪ್ರಶ್ನೆ ಇಲ್ಲ. ಪಠ್ಯ ಪರಿಷ್ಕರಣೆ ಮುಗಿದ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಪಠ್ಯದಲ್ಲಿ ಬಸವಣ್ಣ ವಿಚಾರಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಬೇರೆ ಬೇರೆ ಸ್ವಾಮೀಜಿಗಳು ಪತ್ರ ಬರೆದಿದ್ದಾರೆ. ನಮ್ಮದು ಬಸವ ಪಥ ಸರ್ಕಾರ. ನಿನ್ನೆ ಎಲ್ಲ ತರಿಸಿ ನೋಡಿದ್ದೇನೆ. ಕಾಂಗ್ರೆಸ್ ಅವಧಿಯಲ್ಲಿ ಬರಗೂರು ರಾಮಚಂದ್ರ ಸಮಿತಿ ಹಾಗೂ ಈಗ ನಡೆದ ಪರಿಷ್ಕರಣೆ ಒಂದೇ ಲೈನ್ ಅಷ್ಟೇ ವ್ಯತ್ಯಾಸ ಇದೆ ಎಂದರು.
ಲಿಂಗ ದೀಕ್ಷೆಯ ಬಗ್ಗೆ ಈ ಹಿಂದೆ ಪಠ್ಯದಲ್ಲೂ ಇದೆ. ಈ ಎಲ್ಲಾ ನಿಟ್ಟಿನಲ್ಲಿ ಸಮಗ್ರವಾದ ಬದಲಾವಣೆ ಮಾಡಿ ಬಸವಣ್ಣ ನಿಜವಾದ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂದು ಎಲ್ಲರ ಇಚ್ಚೆಯಾಗಿದೆ ಎಂದರು. ಇನ್ನು ಆರ್ಎಸ್ಎಸ್ ಸ್ಥಾಪಕ ಕೆ.ಬಿ ಹೆಡ್ಗೆವಾರ್ ಕುರಿತಾದ ವಿಚಾರ ಪಠ್ಯದಲ್ಲಿ ಇದ್ದರೆ ಏನು ತಪ್ಪು? ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ :-  ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ – ಸಿಎಂ ಬೊಮ್ಮಾಯಿ ಸ್ಪಷ್ಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!