ಧಾರವಾಡ (Dharwad) ದಲ್ಲಿ ಶ್ರೀ ರಾಮ ಸೇನೆ (Sri rama sena) ಮುಖಂಡ ಪ್ರಮೋದ್ ಮುತಾಲಿಕ್ (Pramodh mutalik) ನಿವಾಸದ ಮುಂದೆ 10 ಕ್ಕೂ ಹೆಚ್ಚು ಪೊಲೀಸ್ (Police) ಸಿಬ್ಬಂದಿಯನ್ನು ಭದ್ರತೆಗೆ ಆಯೋಜನೆ ಮಾಡಲಾಗಿದೆ. ಒಂದು ಕೆ ಎಸ್ ಆರ್ ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ರಾಜ್ಯ ಸರಕಾರ ಪ್ರತ್ಯೇಕ ಮುಸ್ಲಿಂ ಕಾಲೇಜು (Muslim college) ಸ್ಥಾಪನೆಗೆ ಮುಂದಾಗಿದೆ.
ನಿನ್ನೆ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡುವುದರ ಬಗ್ಗೆ ಪ್ರಮೋದ್ ಮುತಾಲಿಕ್ ವಿರೋಧಿಸಿದ್ದರು. ಮುತಾಲಿಕ್ ವಿರೋಧಿಸಿದ್ದಕ್ಕೆ ವಾಟ್ಸಪ್ ಮುಖಾಂತರ ಪೂತ್ತೂರಿನ ಮಹ್ಮದ್ ಆಸಿಫ್ ಜೀವ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆ ಹಾಕಿ ಆಡಿಯೋವನ್ನು ಪ್ರಮೋದ್ ಮುತಾಲಿಕ್ ವಾಟ್ಸಪ್ ಗೆ ಕಳುಹಿಸಿದ್ದಾರೆ. ಇದನ್ನೂ ಓದಿ : – ಇಂದಿನಿಂದ ತುಮಕೂರಿನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ
ಪ್ರಮೋದ್ ಮುತಾಲಿಕ್ ಬಗ್ಗೆ ಅವಹೇಳನವಾಗಿ ಮಹ್ಮದ್ ಆಸಿಫ್ ಮಾತನಾಡಿದ್ದರು. ಸದ್ಯ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಗೆ ಪ್ರಮೋದ್ ಮುತಾಲಿಕ್ ಆಗಮಿಸಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ದೂರಿನ ಪ್ರತಿಯಲ್ಲಿ ಮುತಾಲಿಕ್ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ : – ಜೆಡಿಎಸ್ ಸುನಾಮಿ ಅಲೆಯಲ್ಲಿ ಎಲ್ಲಾ ಪಕ್ಷಗಳು ಕೊಚ್ಚಿ ಹೋಗುತ್ತವೆ – ಮಾಜಿ ಸಿಎಂ ಕುಮಾರಸ್ವಾಮಿ