ಬೆಳಗಾವಿ (Belagavi) ಯಲ್ಲಿ ಕೊರೆಯುವ ಚಳಿಯಲ್ಲಿ ಸಾರಿಗೆ ಸಿಬ್ಬಂದಿ (Transport worker) ಅಹೋರಾತ್ರಿ ಧರಣಿ ನಡೆಸಿದ್ದಾರೆ. ವಜಾಗೊಂಡ ನೌಕರರ ಮರುನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಸುವರ್ಣಸೌಧ ಬಳಿ ಪ್ರತಿಭಟನಾ (Protest) ನಿರತ ಸಾರಿಗೆ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಬಸ್ತವಾಡ ಬಳಿಯ ಟೆಂಟ್ ನಲ್ಲಿ ಪ್ರತಿಭಟನಾ ನಿರತ ಮಹಿಳಾ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ವೇತನ ಆಯೋಗ ಮಾಡೋದು ಕಷ್ಟ ಇಲ್ಲ ಅಂತಾ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರಿಗೆ ಧರಣಿ ಸತ್ಯಾಗ್ರಹ ನಿಲ್ಲಸದಿದ್ರೆ 353 ಕೇಸ್ ದಾಖಲಿಸುವ ಬಗ್ಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಸಾರಿಗೆ ನೌಕರರ ಧರಣಿಯನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಉಪವಾಸ ಧರಣಿ ಸತ್ಯಾಗ್ರಹ ನಿಲ್ಲಿಸಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಪೊಲೀಸರು (Police) ಹೇಳಿದ್ದಾರೆ. ಅಹೋರಾತ್ರಿ ಧರಣಿ ನಡೆಸುತ್ತಿದ್ದ 30 ಜನರನ್ನು ಧರಣಿ ಸ್ಥಳದಿಂದ ಪೋಲಿಸರು ಹೊರಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೌಕರರು ಧರಣಿ ಕುಳಿತಿದ್ದರು. ಪ್ರತಿಭಟನಾ ನಿರತ ಕರ್ನಾಟಕ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಅಸ್ವಸ್ಥರಾಗಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗ್ಯಾಸ್ಟಿಕ್ ಆಗಿ ಎದೆನೋವು ಆಗ್ತಿದೆ ಯಾರು ಗಾಬರಿ ಪಡಬೇಡಿ. ಶಾಂತಿಯುತ ಹೋರಾಟ ಮುಂದುವರಿಸಿ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದನ್ನು ಓದಿ :- ಸಿಎಂ ಬೊಮ್ಮಾಯಿ ನಿವಾಸಕ್ಕೆ ಕೇಂದ್ರ ಸಚಿವ ಜೋಶಿ ಭೇಟಿ…!
ಆರ್ . ಚಂದ್ರಶೇಖರ್ (Chandrashekar) , ಬಸವರಾಜು, ಲೋಕೇಶ, ಕೃಷ್ಣಾ ಗುಡಗುಡಿ, ಮಂಜಮ್ಮ, ಜಯಶ್ರೀ, ಅನಿಲಕುಮಾರ, ಸಂತೋಷ ಕುಮಾರ್, ಕೇಶವನ ಡಿ,ಜಯಂತ ಮರ್ಗಿ ಅವರಿಂದ ಉಪವಾಸ ಸತ್ಯಾಗ್ರಹ ನಡೆದಿದೆ. ವಜಾಗೊಂಡ 700 ನೌಕರರನ್ನ ಯಾವುದೇ ನಿಬಂಧನೆ ಇಲ್ಲದೇ ವಾಪಸ್ ಪಡೆಯಬೇಕು. ವೇತನ ಆಯೋಗದ ಮಾದರಿಯಲ್ಲಿ ಸಂಬಳ ನೀಡಬೇಕು. ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ :- ಹೊಸ ವರ್ಷಕ್ಕೆ ಬೆಂಗಳೂರಿಗೆ ಬರಬೇಕಾಗಿದ್ದ ದೊಡ್ಡ ಪ್ರಮಾಣದ ಗಾಂಜಾ ಸೀಜ್…!