ಕುಡಿದ ಮತ್ತಿನಲ್ಲಿ ಓದುವ ಮಕ್ಕಳ (Students) ಮೇಲೆ ವಸತಿ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯ ನಿರ್ದೇಶಕ ಭರತ್ (Bharath) ಎಂಬುವರು ರಾತ್ರಿ ಹತ್ತು ಗಂಟೆ ಸಮಯದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಬೆಲ್ಟ್ ಮತ್ತು ದೊಣ್ಣೆಯಿಂದ ಭರತ್ ಹಲ್ಲೆ ಮಾಡಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳು ಕಳೆದಿದ್ರು ಶಾಲಾ ಆಡಳಿತ ಮಂಡಳಿಯವರು ಘಟನೆಯನ್ನು ಮುಚ್ಚಿಟ್ಟಿದ್ದರು. ದಮ್ಮಯ ಅಂದ್ರೂ ಬಿಟ್ಟಿಲ್ಲ, ಕಾಲಿಗೆ ಬಿದ್ರೂ ಬಿಡದೆ ಮದ್ಯದ ನಶೆಯಲ್ಲಿ ಹಲ್ಲೆ ಮಾಡಿದ್ದಾರೆ. ಮಕ್ಕಳು ಬೇಗ ಮಲಗಿದ್ದೇ ಈ ನೀಚನಿಗೆ ತಪ್ಪಾಯ್ತು.ಕಾರಣ ಇಲ್ಲದೇ ಕುಡಿದ ನಶೆಯಲ್ಲಿ ಹಲವು ಬಾರಿ ಭರತ್ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದು ಮೂರು ದಿನಗಳ ನಂತರ ಪೋಷಕರಿಗೆ ಮಕ್ಕಳು ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಭರತನ ಮೇಲೆ ಪೋಷಕರು ದೂರು ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿರುವ ಭರತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : – ನನಗೆ ಏನು ಗೊತ್ತು ನಿಮ್ಮತ್ರನೇ ಉತ್ತರ ಇದೆ ನಿಮ್ಮತ್ರನೇ ಪ್ರಶ್ನೆ ಇದೆ – ಡಿ.ಕೆ ಶಿವಕುಮಾರ್