ಕೆಂಪಣ್ಣ ( kempanna ) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಕೇಸ್ ಈಗಾಗಲೇ ರಿಜಿಸ್ಟ್ರಾರ್ ಆಗಿದೆ ಎಂದು ಕೆಂಗಲ್ ಗೇಟ್ ಬಳಿ ಸಚಿವ ಮುನಿರತ್ನ ( munirathna ) ಹೇಳಿದ್ದಾರೆ. ಎರಡು ರೀತಿಯ ಕೇಸ್ ಹಾಕಲಾಗಿದೆ. 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಕ್ರಿಮಿನಲ್ ಕೇಸ್ ಕೂಡ ಹಾಕಿದ್ದೇನೆ. ನಾಲ್ಕು ತಿಂಗಳಲ್ಲಿ ಮುಗೀಬೇಕು ಅಂತ ಹೈಕೋರ್ಟಿನಲ್ಲೂ ಹಾಕಿದ್ದೇನೆ.
ಐದು ಕಡೆ ವಕೀಲರ ಮೂಲಕ ನೋಟೀಸ್ ಕೊಡಲಾಗಿದೆ. ಪ್ರಧಾನಿಗೆ ಪತ್ರ ಬರೆದಿರೋ ಬಗ್ಗೆ ದಾಖಲೆ ಕೊಡಿ, ಇಲ್ಲ ಸುದ್ದಿಗೋಷ್ಟಿ ಮಾಡಲು ಹೇಳಿದ್ದೆ. ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ಬಿಡುಗಡೆ ಆಗದಿದ್ರೆ ರಾಜ್ಯಪಾಲರಿಗೆ ಕೊಡಲು ಹೇಳಿದ್ದೆ. ಲೋಕಾಯುಕ್ತಗೆ ನೀಡಲು ಹೇಳಿದ್ದೆ ಅಲ್ಲೂ ಕೊಟ್ಟಿಲ್ಲ. ಸೆಷನ್ ನಡೆಯುತ್ತಿದೆ, ಸಿದ್ದರಾಮಯ್ಯ ( siddaramaiah ) ಗೆ ಕೊಡಿ ಎಂದಿದ್ದೆ ಅಲ್ಲೂ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರದ ತನಿಖೆ ಯಾಕೆ ಮಾಡ್ತಿಲ್ಲ ಅನ್ನೋ ಪ್ರಶ್ನೆ.? ಏಳು ದಿನ ಆದ್ರೂ ಕೊಟ್ಟಿಲ್ಲ. 40% ದೂರನ್ನ ಗುತ್ತಿಗೆದಾರರು ಯಾರೂ ಕೊಡ್ತಿಲ್ಲ. ದೇಶದಲ್ಲಿ 40% ಲಂಚ ಕೊಡ್ತಿದ್ದೀನಿ ಅಂತ ಮರ್ಯಾದೆ ಕಳೆದಿದ್ದಾರೆ. ದೇಶದಲ್ಲಿ ಮರ್ಯಾದೆ ತೆಗೆದಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಬೇಕು. ದಾಖಲೆ ಇದ್ರೆ ನನಗೆ ಶಿಕ್ಷೆ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ :- Breaking News – ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂ ಮಧ್ಯಂತರ ತಡೆ