ಮತದಾರರ ಮಾಹಿತಿ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಇಬ್ಬರು ಐಎಎಸ್ ( IAS ) ಅಧಿಕಾರಿಗಳನ್ನು ಅಮಾನತು ಮಾಡಿದೆ.
ಬಿಬಿಎಂಪಿ ( BBMP ) ಯ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ರಂಗಪ್ಪ ( RANGAPPA ) ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಇದನ್ನೂ ಓದಿ : – ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ದೆಹಲಿಗೆ ಬುಲಾವ್…!
ಬಿಬಿಎಂಪಿ ಅಧಿಕಾರಿಗಳ ಬದಲಿಗೆ ಹೊರಗಿನಿಂದ ಮೂವರು ಅಧಿಕಾರಿಗಳನ್ನು ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಬೇಕು ಎಂದು ಸೂಚಿಸಿದೆ.ಜೊತೆಗೆ ನಾಲ್ಕು ಮಂದಿ ಅಧಿಕಾರಿಗಳನ್ನು ಬಿಬಿಎಂಪಿಯಲ್ಲಿ ಮತದಾರರ ಪಟ್ಟಿ ವೀಕ್ಷಕರಾಗಿ ನೇಮಕ ಮಾಡಬೇಕು ಎಂದು ಆಯೋಗ ಸೂಚಿಸಿದೆ.
ವಿಶೇಷ ಮತದಾರರ ಪಟ್ಟಿ ಪರೀಕ್ಷಣೆಗೆ ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶವನ್ನು ಡಿಸೆಂಬರ್ 9ರ ಬದಲಿಗೆ ಡಿಸೆಂಬರ್ 24ರ ವರೆಗೆ ವಿಸ್ತರಿಸುವಂತೆಯೂ ಸೂಚನೆ ನೀಡಿದೆ. ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧಪಟ್ಟ ಈಗಾಗಲೇ ಕಾಡುಗೋಡಿ ಹಾಗೂ ಹಲಸೂರು ಗೇಟ್ ಠಾ ಣೆಯಲ್ಲಿ ಎರಡು FIR ದಾಖಲಾಗಿದೆ. ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಜಂಟಿ ನಿರ್ದೇಶಕ ಅನುಜ್ ಚಂಡಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : – ಬೀಳದೆ ಇರೋ ಮನೆಗಳಿಗೆ ಪರಿಹಾರ ನೀಡಿದರೆ ಅದು ಪಾಪದ ಕೆಲ್ಸ – ಸೋಮಣ್ಣ