ಇಂದು ವಿಧಾನಸೌಧ (Vidhanasoudha) ದ ನಿರ್ಮಾತೃ, ಸ್ವಾತಂತ್ರ್ಯ ಹೋರಾಟಗಾರ ಕೆಂಗಲ್ ಹನುಮಂತಯ್ಯ (Kengal hanumantaiah) ಅವರ ಪುಣ್ಯತಿಥಿ. ಅವರ ಆದರ್ಶವನ್ನು ನಾವು ನೆನೆಯಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕರ್ನಾಟಕದ ಏಕೀಕರಣಕ್ಕೆ ಅಪ್ರತಿಮ ಕೊಡುಗೆ ನೀಡಿದವರು ಕೆಂಗಲ್ ಹನುಮಂತಯ್ಯ. ಮೈಸೂರು ಒಡೆಯರ್ ರಾಜಮನೆತನದ ಪ್ರಭಾವದಿಂದ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ರು.
ಬೆಂಗಳೂರು (Benglauru) ಶಕ್ತಿಕೇಂದ್ರ ಆಗಬೇಕು ಅಂತ ವಿಧಾನಸೌಧ ನಿರ್ಮಾಣ ಮಾಡಿದ್ರು. ಇಡೀ ಭಾರತದಲ್ಲೇ ಈ ತರದ ವಿಧಾನಸೌಧ ಇಲ್ಲ. ಆದ್ರೆ ಅವ್ರಿಗೆ ಇಲ್ಲಿ ಕುಳಿತು ಆಡಳಿತ ಮಾಡಲು ಸಾಧ್ಯವಾಗಿಲ್ಲ . ಕೇಂದ್ರದ ರೈಲ್ವೇ ಸಚಿವರು ಆಗಿ ಕೆಲಸ ಮಾಡಿ ಡಬಲ್ ಲೈನ್ ರೈಲ್ವೆ ಯೋಜನೆ ತಂದಿದ್ರು ಎಂದು ಹೇಳಿದರು.ಇದೇ ವೇಳೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ ಬಗ್ಗೆ ಮಾತನಾಡಿದ ಸಿಎಂ ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ. ರೌಡಿಗಳನ್ನು ನಾವು ಪ್ರೋತ್ಸಾಹಿಸಲ್ಲ ಎಂದು ಹೇಳಿದ್ರು. ರೌಡಿಗಳ ಸಹವಾಸದಲ್ಲಿ ಬಿಜೆಪಿ ನಾಯಕರು ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಇದರ ಬಗ್ಗೆ ನಾನು ಹೆಚ್ಚಿಗೆ ಮಾತಾಡಲು ಹೋಗಲ್ಲ. ಅವರಿಗೆ ಯಾವುದೇ ಅವಕಾಶಗಳನ್ನೂ ಕೊಡಲ್ಲ. ಇದು ಬಹಳ ಸ್ಪಷ್ಟ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ : – ಜನರ ಭಾವನೆಗಳ ಮೇಲೆ ರಾಜಕೀಯ ಮಾಡೋದು ಬಿಜೆಪಿ ಸಿದ್ದಾಂತ – ಡಿ.ಕೆ.ಶಿವಕುಮಾರ್
ಗಡಿ ವಿವಾದದ ವಿಚಾರಣೆ
ನಮ್ಮ ರಾಜ್ಯದ ನಿಲುವು ಬಹಳ ಸ್ಪಷ್ಟ. ಮಹಾರಾಷ್ಟ್ರ (Maharastra) ದ ಅರ್ಜಿ ಮೆಂಟೇನೆಬಲ್ ಅಲ್ಲ ಅನ್ನೋದು ನಮ್ಮ ನಿಲುವು. ಇದನ್ನೇ ನಮ್ಮ ವಕೀಲರು ವಾದ ಮಾಡ್ತಾರೆ. ನಮ್ಮ ನಿಲುವು ಸಂವಿಧಾನ ಬದ್ಧವಾಗಿದೆ, ಕಾನೂನಾತ್ಮಕವಾಗಿದೆ. ಆ ಎಲ್ಲ ಅಂಶಗಳನ್ನು ನಮ್ಮ ವಕೀಲರು ವಾದ ಮಾಡ್ತಾರೆ ಎಂದು ಹೇಳಿದರು. ಇದೇ ವೇಳೆ ವಕ್ಫ್ ಬೋರ್ಡ್ ನಿಂದ ಮುಸ್ಲಿಮ್ (Muslim) ಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ವಿಷಯ ಸರ್ಕಾರದ ಮಟ್ಟದಲ್ಲಿ ಚರ್ಚೆಯೇ ಆಗಿಲ್ಲ, ಇದು ಸರ್ಕಾರದ ನಿಲುವು ಅಲ್ಲ, ಈ ಬಗ್ಗೆ ಚರ್ಚೆ ಆಗಿಲ್ಲ. ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿರುವುದು ಅವರ ವೈಯಕ್ತಿಕ ಹೇಳಿಕೆಯಷ್ಟೇ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : – ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ- ತಾಂಬೂಲ ಬದಲಿಸಿಕೊಂಡ ಕುಟುಂಬ