ಚಿಕ್ಕಬಳ್ಳಾಪುರ ( CHIKKABALLAPURA ) ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಕೆಂಕರೆ ಗ್ರಾಮದ ಕೆರೆಕಟ್ಟೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೆಂಕರೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ( MTB NAGARAJ ) ಭೇಟಿ ನೀಡಿದ್ದಾರೆ.
ನಂತರ ಮಾತನಾಡಿದ ಅವರು, SC -ST ಮೀಸಲಾತಿ ಹೆಚ್ಚಳ ಬೆನ್ನಲ್ಲೇ ಕುರುಬ ಸಮುದಾಯವನ್ನು SC -ST ಗೆ ಸೇರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಬೇರೆ ಬೇರೆ ಸಣ್ಣ ಸಮುದಾಯಗಳೂ ಮೀಸಲಾತಿ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡುತ್ತೇವೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುಲು ಕ್ರಮ ವಹಿಸುತ್ತೇವೆ ಎಂದು ಹೇಳಿದ್ರು. ಇದನ್ನೂ ಓದಿ : – ಮಂತ್ರಾಲಯಕ್ಕೆ ಗಾಂಧಿ ಕುಟುಂಬದ ಮೊದಲ ಭೇಟಿ – ಗುರುವಾರ ರಾಹುಲ್ ರಾಯರ ದರ್ಶನ
ಕೆರೆ ಮೇಲೆ ಸ್ಕೂಟರ್ ಏರಿ ಹೊರಟ ಎಂ.ಟಿ.ಬಿ
ಕೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಎಂ.ಟಿ.ನಾಗರಾಜ್ ಅರ್ಧ ಕಿಲೋಮೀಟರ್ ನಡೆದುಕೊಂಡು ಬಂದು ಸ್ಕೂಟರ್ ನಲ್ಲಿ ವಾಪಸ್ ಆಗಿದ್ದಾರೆ. ವಯಸ್ಸಾದ ಕಾರಣ ಸುಸ್ತಾಗಿದ್ದಕ್ಕೆ ನಡೆಯಲಾಗದೇ ಸ್ಕೂಟರ್ ಏರಿ ವಾಪಸ್ ಹೊರಟಿದ್ದಾರೆ.
ಇದನ್ನೂ ಓದಿ : – ಐತಿಹಾಸಿಕ ಮೈಸೂರು ಅರಮನೆಗೆ ಹೊಂದಿಕೊಂಡಿರುವ ಕೋಟೆ ಗೋಡೆ ಕುಸಿತ