ಚಿಲುಮೆ ಡೇಟಾ ಸಂಗ್ರಹ ಪ್ರಕರಣಕ್ಕೆ ಸಂಸದ ಪಿ .ಸಿ ಮೋಹನ್ (PC. Mohan) ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನವರಿಗೆ ಅಶ್ವಥ್ ನಾರಾಯಣ್ (Ashwath narayan) ಮೇಲೆ ಹೊಟ್ಟೆ ಉರಿಯಿದೆ. ಹೊಟ್ಟೆ ಉರಿಗೆ ಕಾಂಗ್ರೆಸ್ ನವ್ರು ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ. ಅಶ್ವಥ್ ನಾರಾಯಣ್ ಅವರು ಮಂತ್ರಿಯಾಗಿ ಬೆಳಿತಿದ್ದಾರೆ.
ಸಮಾಜದಲ್ಲಿ ಬೆಳಿತಿದ್ದಾರೆ, ಒಳ್ಳೆ ಕೆಲಸ ಮಾಡ್ತಿದ್ದಾರೆ. ಇದನ್ನು ಕಾಂಗ್ರೆಸ್ ನವ್ರು ಸಹಿಸದೇ ಆರೋಪ ಮಾಡ್ತಿದಾರೆ. ಪ್ರಕರಣದ ತನಿಖೆ ಮಾಡುವ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. ಏನೇ ಲೋಪ ದೋಷ ಇದ್ದರೂ ಖಂಡಿತವಾಗಿಯೂ ಸಿಎಂ ಕ್ರಮ ತಗೋತಾರೆ. ಕಾಂಗ್ರೆಸ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ರು. ಬೆಂಗಳೂರಿನಲ್ಲಿ ಹೊರ ಜಿಲ್ಲೆಗಳಿಂದ ಬಹಳಷ್ಟು ಜನ ಹೊರಗಿಂದ ಬಂದಿದ್ದಾರೆ. ಇಲ್ಲಿ ಬಂದವರು ಬಾಡಿಗೆ ಮನೆಗಳಲ್ಲಿ ವಾಸ ಮಾಡಿ ಏರಿಯಾಗಳನ್ನು ಬದಲಾಯಿಸುತ್ತಿರುತ್ತಾರೆ. ಇವತ್ತು ಮಹಾದೇವಪುರದಲ್ಲಿ ಇರ್ತಾರೆ ನಾಳೆ ರಾಜಾಜಿನಗರದಲ್ಲಿ ಇರ್ತಾರೆ. ನಂತರ ಇನ್ನೊಂದು ಕಡೆಗೆ ಹೋಗ್ತಾರೆ. ಇದನ್ನೂ ಓದಿ : – ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ..!
ಎಲ್ಲಿ ಕೆಲಸ ಸಿಗುತ್ತೋ ಅಲ್ಲಿಗೆ ಹೋಗ್ತಾರೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ರದ್ದಾಗೋದು ಸಹಜ. ಇಂಥ ಮತದಾರರ ಹೆಸರು ರದ್ದಾಗೋದು ಸಹಜ ಪ್ರಕ್ರಿಯೆ. ನಾನೂ ಕೂಡಾ ಎಂಟು ಚುನಾವಣೆ ಕಂಡಿದ್ದೇನೆ. ಹೀಗಾಗಿ ವೋಟರ್ ಲಿಸ್ಟ್ ಪರಿಶೀಲಿಸಿದಾಗ ವ್ಯತ್ಯಾಸಗಳು ಕಾಣಿಸ್ತವೆ. ಜನ ಶಿಫ್ಟ್ ಆಗ್ತಿರ್ತಾರೆ, ಅವರ ಹೆಸರು ಡಿಲೀಟ್ ಮಾಡ್ತಾರೆ, ಸೇರ್ಪಡೆನೂ ಮಾಡಿರ್ತಾರೆ. ಇತರ ಮಾಡುವುದರಲ್ಲಿ ತಪ್ಪಿಲ್ಲ ಎಂದು ಪಿ ಸಿ ಮೋಹನ್ ತಿಳಿಸಿದ್ದಾರೆ.
ಇದನ್ನೂ ಓದಿ : – ಮತದಾರರ ಪಟ್ಟಿಯಲ್ಲಿ ಹೆಸರುಗಳ ಡಿಲೀಟ್ ಪ್ರಕರಣ – ಚಿಲುಮೆ ಸಂಸ್ಥೆ ಸಿಬ್ಬಂದಿಗೆ ಸಖತ್ ಡ್ರಿಲ್..!