ಸತ್ತವರು ಮುಸ್ಲಿಂರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೆ..? ಎಂದು ರಾಜ್ಯ ಸರ್ಕಾರಕ್ಕೆ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( basavaraj bommai ) ಯವರಿಗೊಂದು ಬಹಿರಂಗ ಪತ್ರ. ನೀವು ಈ ರಾಜ್ಯದ ಮುಖ್ಯಮಂತ್ರಿ. ಸದ್ಯ ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಪ್ರವೀಣ್ ಸಾವಿಗೆ ನೀವು ಸ್ಪಂದಿಸಿದ್ದು ಅನುಕರಣೀಯ. ಆದರೆ ಸತ್ತ ಫಾಜೀಲ್ಗೆ ಹಾಗೂ ಮಸೂದ್ ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ..? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿಯವರೆ, ನಿಮ್ಮ ಭಾಗದಲ್ಲಿ ಪಿಂಜಾರ ಮುಸ್ಲಿಂರಿದ್ದಾರೆ. ನಿಮ್ಮಲ್ಲಿ ಗಣೇಶೋತ್ಸವವಾಗಲಿ, ಉರುಸ್ ಆಗಲಿ ಅಲ್ಲಿ ಹಿಂದೂ ಮುಸಲ್ಮಾನರ ಪರಸ್ಪರ ಭಾಗವಹಿಸುವಿಕೆಯಿದೆ. ಈ ಹಿಂದೆ ಕರಾವಳಿಯೂ ಭಾವೈಕ್ಯತೆಯ ನಾಡಾಗಿತ್ತು. ಕರಾವಳಿಯಲ್ಲಿ ಮಾಪಿಳ್ಳ ಮುಸಲ್ಮಾನರು, ಹಿಂದೂಗಳು ಒಟ್ಟಾಗಿಯೇ ಇದ್ದರು. ಈ ಸಂಬಂಧಕ್ಕೆ ಹುಳ್ಳಿ ಹಿಂಡಿದ್ಯಾರು.? ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ :- ನಾಳೆ ಮಂಗಳೂರಿಗೆ ಭೇಟಿ ಕೊಡುತ್ತಿದ್ದೇನೆ ಹತ್ಯೆಯಾಗಿರೋ 3 ಕುಟುಂಬಗಳನ್ನ ಭೇಟಿಯಾಗುತ್ತೇನೆ – ಹೆಚ್ಡಿಕೆ
ಬೊಮ್ಮಾಯಿಯವರೆ, ಸೌಹಾರ್ದೆತೆಯಿಂದಿದ್ದ ಕರಾವಳಿ ಇಂದು ಕೋಮುದಳ್ಳುರಿಯ ನೆಲವಾಗಿದ್ದಕ್ಕೆ ಕಾರಣ ಯಾರು? ಸಂಘ ಪರಿವಾರ ಹಾಗು PFI ಅಂತ ಕೋಮು ಸಂಘಟನೆಗಳು ಇದಕ್ಕೆ ಕಾರಣವಲ್ಲವೆ? ನೀವು ಬಿತ್ತಿದ್ದೇ ಈಗ ಫಲವಾಗಿ ಸಿಗುತ್ತಿರುವುದಲ್ಲವೆ? ನೀವು ಜನತಾ ಪರಿವಾರದ ಹಿನ್ನಲೆಯವರು. ನಿಮಗೆ ಈ ಸೂಕ್ಷ್ಮ ಅರ್ಥವಾಗಿರಬೇಕೆಂದು ಭಾವಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ :- ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ಅಲ್ಲ, ಚಿಕನ್ ಪಾಕ್ಸ್ –ಡಾ.ಕೆ ಸುಧಾಕರ್