ಪೇಸಿಎಂ ( paycm ) ಪೋಸ್ಟರ್ ಅಭಿಯಾನದ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಸಿಎಂ ಬೊಮ್ಮಾಯಿ( basavaraj bommai ) ಹೇಳಿಕೆಗೆ ಗೌರಿಬಿದನೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ( siddaramaiah ) ಪ್ರತಿಕ್ರಿಯೆ ನೀಡಿದ್ದಾರೆ.
ಇಂತಹ ಬೆದರಿಕೆಗಳಿಗೆಲ್ಲಾ ನಾವು ಬೆದರ್ತೀವಾ..? ಕಾನೂನು ನಮಗೂ ಗೊತ್ತಿದೆ. ನಾ ಲಾ ಓದಿದ್ದೀನಿ ಅವ ಲಾ ಓದಿಲ್ಲ. ಅವರು ಇಂಜಿನಿಯರಿಂಗ್ ಓದಿರೋದು. ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ..? ಕಮೀಷನ್ ಅಂತ ಕೆಂಪಣ್ಣ ಹೇಳ್ತಾರಲ್ಲ. ಕೆಂಪಣ್ಣ ( kempanna ) ನ ಮೇಲೆ ಕ್ರಮ ತಗೊಳ್ಳಿ…ಯಾಕೆ 1 ವರ್ಷ ಆದ್ರೂ ಕ್ರಮ ತಗೊಂಡಿಲ್ಲ. ಯಾಕೆ ಅಂದ್ರೆ ಇವರ ಬಣ್ಣ ಬಯಲಾಗುತ್ತೆ ಅಂತ ತಗೊಂಡಿಲ್ಲ. ಬಿಜೆಪಿ ಸರ್ಕಾರದವರು ತಪ್ಪಿತಸ್ಥರು ಹಾಗಾಗಿ ಪಲಾಯನವಾದ ಮಾಡ್ತಿದ್ದಾರೆ. ಇದನ್ನು ಓದಿ :-18 ತಿಂಗಳುಗಳ ಕಾಲ ಕೋಮಾದಲ್ಲಿದ್ದಾನೆಂದು ಮನೆಯಲ್ಲೇ ಶವ ಇಟ್ಟುಕೊಂಡಿದ್ದ ಕುಟುಂಬ
ಭ್ರಷ್ಟಾಚಾರ ವ್ಯಾಪಕವಾಗಿ ಈ ಸರ್ಕಾರದಲ್ಲಿ ನಡೀತಿದೆ. ಅದಕ್ಕೆ ಪಲಾಯನ ಮಾಡ್ತಿದ್ದಾರೆ. ಮಂಗಳವಾರ ೪೦% ಕಮೀಷನ್ ಬಗ್ಗೆ ಚರ್ಚೆಗೆ ಅವಕಾಶ ಕೇಳಿದೆ. ಅದು ಚರ್ಚೆಗೆ ಬರಬಾರದು ಹಾಗೆ ನೋಡಿಕೊಂಡ್ರು ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ಬೆಳಗಾಂ ( belgam ) ನಲ್ಲಿ ಕೊಟ್ಟಾಗಲೂ ಚರ್ಚೆ ಆಗಲಿಲ್ಲ ಈಗಲೂ ಆಗಲಿಲ್ಲ. ವಿದ್ಯುತ್ ದರ ಏರಿಕೆ ಅಲ್ಲ ಎಲ್ಲ ಬೆಲೆಗಳು ಗಗನಕ್ಕೆ ಏರಿದೆ. ಬೆಲೆ ಏರಿಸೋದು ಬಡವರ ಹೊಟ್ಟೆ ಮೇಲೆ ಒಡೆಯೋದು ಬಿಜೆಪಿ ಕೆಲಸ. ಬಡವರ ರಕ್ತ ಹಿರೋದು ಇವರ ಕಾಯಕ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ :- ವೀರಶೈವ ಲಿಂಗಾಯಿತರನ್ನಒಡೆದವರು ಯಾರು..? – ಬಿ.ವೈ.ವಿಜಯೇಂದ್ರ ಪ್ರಶ್ನೆ