ಪಂಚಮಸಾಲಿ (Panchamasali) ಸಮಾಜಕ್ಕೆ 2- ಎ ಮೀಸಲಾತಿ ವಿಚಾರಕ್ಕೆ ಗದಗದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ (CC.Patil) ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಅವರಿಗೆ ಮೀಸಲಾತಿಗೆ ಪ್ರಾಮಾಣಿಕ ಕಳಕಳಿ ಇದೆ. ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ (Jayamrutyunjaya swamiji) ಗಳಿಗೆ ಹಲವು ಭಾರಿ ಮನವಿ ಮಾಡಿದ್ದೇನೆ.
ಶ್ರೀಗಳು ಹೋರಾಟ ಮಾಡಲಿ, ಆದ್ರೆ ಸಿಎಂ ಅವರನ್ನು ಯಾಕೇ ಟಾರ್ಗೆಟ್ ಮಾಡ್ತಾರೆ ಎನ್ನುವದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ ಎಂದು ಹೇಳಿದರು. ಅವರ ಮನೆ ಮುಂದೆ ಯಾಕೇ ಧರಣಿ ಮಾಡಬೇಕು, ಅವರ ಕ್ಷೇತ್ರದಲ್ಲಿ ಸತ್ಯಾಗ್ರಹ ಯಾಕೆ ಮಾಡಬೇಕು. ಈ ಹಿಂದೆ ಅವರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ನಾವು ಕೂಡಾ ಸಾಕಷ್ಟು ಖರ್ಚು ಮಾಡಿ, ಜನರನ್ನು ಕಳಿಸಿದ್ದೇವೆ. ಎಲ್ಲರ ಸಹಕಾರ ತೆಗೆದುಕೊಂಡ್ರು, ಈವಾಗ ಒಬ್ಬಿಬ್ಬರ ಮಾತು ಕೇಳಿಕೊಂಡು ಸಿಎಂ ಮನೆ ಮುಂದೆ ಕುಡುತ್ತೇನೆ ಅಂತಾರೆ. ಶ್ರೀಗಳಿಗೆ ತಿಳಿಸಿ ಹೇಳಿದ್ದೇನೆ, ರಾಜ್ಯದ ಬೃಹತ್ ಸಮಾಜದ ಶ್ರೀಗಳು ಒಬ್ಬಿಬ್ಬರ ಮಾತು ಕೇಳಿಕೊಂಡು, ನಿರ್ಧಾರ ಮಾಡೋದು ಸರಿಯಿಲ್ಲ . ಶ್ರೀಗಳು ಸಿಎಂ ಬೊಮ್ಮಾಯಿ ಅವರನ್ನು ಟಾರ್ಗೆಟ್ ಮಾಡೋದನ್ನು ನಾನು ವಿರೋಧಿಸುತ್ತೇನೆ ಎಂದು ಸಿ ಸಿ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : – ಮೈಸೂರಿನಲ್ಲಿ ಸಾಹಸಸಿಂಹ ದಿ. ವಿಷ್ಣು ವರ್ಧನ್ ಹುಟ್ಟುಹಬ್ಬದ ಸಂಭ್ರಮ