ಪ್ರಧಾನಿ ನೇತೃತ್ವದ ಯೋಜನೆಗಳು ಗುಜರಾತ್ (Gujrath) ಫಲಿತಾಂಶ ಸಾಕ್ಷಿ. ಗುಜರಾತ್ ನಲ್ಲಿ ದಾಖಲೆ ಗೆಲುವು ಮೋದಿ (Modi) ಜನಪ್ರಿಯತೆ ಎದ್ದು ಕಾಣ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS.Yediyurappa) ಹೇಳಿದ್ದಾರೆ.
ಹಿಮಾಚಲ ಪ್ರದೇಶ (Himachala pradesh) ದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಗ್ತಿದೆ. ಇನ್ನೂ ಅಧಿಕೃತ ಫಲಿತಾಂಶ ಬಂದಿಲ್ಲ. ಕರ್ನಾಟಕದಲ್ಲಿ 140 ಕ್ಕೂ ಹೆಚ್ಚು ಸೀಟು ಗೆಲ್ತೇವೆ. ನಮಗೆ, ಕಾರ್ಯಕರ್ತರಿಗೆ ಹೆಚ್ಚು ಶಕ್ತಿ ಸಿಕ್ಕಿದೆ ಎಂದು ಹೇಳಿದ್ರು. ಯಡಿಯೂರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಎಲ್ಲಿಯೂ ಹೋಗಿಲ್ಲ . ಇಲ್ಲೆ ಇದ್ದೇನೆ. ಈಗಾಗಲೇ ರಾಜ್ಯದ ಪ್ರವಾಸ ಮಾಡ್ತಾ ಇದ್ದೇನೆ. ಇದನ್ನು ಓದಿ : – ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಗೆ ಗೆಲುವು
ಶಕ್ತಿಮೀರಿ ಪಕ್ಷ ಸಂಘಟನೆ ಮಾಡ್ತಾ ಇದ್ದೇವೆ. ಹಗಲು ರಾತ್ರಿ ಎನ್ನದೆ ರಾಜ್ಯದ ಪ್ರವಾಸ ಮಾಡ್ತಾ ಇದ್ದೇವೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ. ಕರ್ನಾಟಕದಲ್ಲಿ ನಮ್ಮದೇಯಾದ ಶಕ್ತಿಯಿದೆ. ಕಾರ್ಯಕರ್ತರು ಇದ್ದಾರೆ, ಅವರನ್ನು ಬೆಳಸಿದ್ದೇವೆ. ನಿಶ್ಚಿತವಾಗಿ ಕರ್ನಾಟಕದಲ್ಲಿ ೧೪೦ ಶೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ರು.
ಬೆಳಗಾವಿ ಗಡಿ (Belagavi border) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯಡಿಯೂರಪ್ಪ, ಇದರ ಬಗ್ಗೆ ಕೂತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು. ಗಡಿ ಸಮಸ್ಯೆ ಬರದ ಹಾಗೇ ನೋಡಿಕೊಳ್ಳುತ್ತೇವೆ. ಗಡಿ ವಿಚಾರ ಬಗ್ಗೆ ಸಂಬಂಧ ಪಟ್ಟವರ ಜೊತೆ ಮಾತಾಡ್ತೀವಿ. ಯಾವುದೇ ಗೊಂದಲ ಆಗದ ಹಾಗೇ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಗಡಿ ವಿಚಾರದಲ್ಲಿ ನಮ್ಮ ಹಿತವನ್ನು ನಾವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ರಾಜ್ಯದ ಹಿತ ಮೊದಲು ನಮ್ಗೆ ಮುಖ್ಯ . ನಮ್ಮ ನೆಲ ಜಲ ಭಾಷೆ ಪ್ರಶ್ನೆ ಬಂದಾಗ ಯಾವುದೇ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ರು.
ಇದನ್ನು ಓದಿ : – ಆಮ್ ಆದ್ಮಿಯಿಂದ ನಮಗೆ ತೊಂದರೆ- ದಿನೇಶ್ ಗುಂಡೂರಾವ್