ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ( C.T RAVI ) ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ( B.K HARIPRASAD ) ಹರಿಪ್ರಸಾದ್ ನಡುವಿನ ಕುಡುಕ ಚರ್ಚೆ ಕುತೂಹಲ ಕೆರಳಿಸಿದೆ. ಸಿಟಿ ರವಿ ಕುಡಿದು ಮಾತನಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಆರೋಪ ಮಾಡಿದರೆ ಈ ಬಗ್ಗೆ ತಪಾಸಣೆ ಮಾಡಿ ಎಂದು ಸಿಟಿ ರವಿ ಸವಾಲು ಹಾಕಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಜ್ಯದಲ್ಲಿ ಮೊಲಾಸಿಸ್ ಹಗರಣ ನಡೆದಿದೆ. ಮೂರು ಲಕ್ಷ ಟನ್ನಷ್ಟು ಮೊಲಾಸಿಸ್ ಅನ್ನು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾಗ್ತಿದೆ. ಇದರಲ್ಲಿ ಭಾರೀ ಹಗರಣ ನಡೆದಿದೆ. ಇದನ್ನು ನಾವು ಬಹಿರಂಗಗೊಳಿಸ್ತೀವಿ. ಇದರಲ್ಲಿ ಕಳ್ಳಬಟ್ಟಿ ಸಾರಾಯಿ ಮಾಡ್ತಾರೆ. ಸಿಟಿ ರವಿ ಹೆಂಡ ಮಾರುವವರು ಕೊಲೆಗಡುಕರು ಅಂತಾ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ ಇವರ ಗುರು ಬಿಎಸ್ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದ್ರು. ಇದರಿಂದ ಸಾವಿರಾರು ಜನ ರಸ್ತೆ ಪಾಲಾದ್ರು. ಈವಾಗ ಹೆಂಡದ ಮೇಲೆ ಕಣ್ಣಿದೆ. 24 ಸಾವಿರ ಕೋಟಿ ಆದಾಯ ಹೆಂಡದ ತೆರಿಗೆ ಮೂಲಕವೇ ಬರುತ್ತದೆ. ಆ ಕಸುಬು ನಡೆಸುತ್ತಿರುವವರನ್ನ ಕೊಲೆಗಡುಕರು ಎಂದು ಹೇಳೋದು ಎಷ್ಟರ ಮಟ್ಟಿಗೆ ಸರಿ. ಸಿಟಿ ರವಿ ಅವರಿಗೆ ಎಳ್ಳಾಮವಾಸ್ಯೆಯಂದು ಸಾರಾಯಿ, ಹೆಂಡ ಸಿಕ್ಕಿರಲಿಲ್ಲ. ಅದಕ್ಕೆ ಕಳ್ಳಬಟ್ಟಿ ಕುಡಿದು ಮಾತಾಡಿದ್ದಾರೆ. ಗುಜರಾತ್ ಮಾದರಿಯಲ್ಲಿ ಮದ್ಯಪಾನ ನಿಷೇಧ ಮಾಡಿ ನೋಡೋಣ ಅಂತಾ ಬಿಕೆ ಹರಿಪ್ರಸಾದ್ ( B.K HARIPRASAD ) ಸವಾಲು ಹಾಕಿದ್ದಾರೆ. ನನ್ನ ಹಿನ್ನೆಲೆ ಇಡೀ ದೇಶಕ್ಕೆ ಗೊತ್ತಿದೆ. ಇವರು ಸಣ್ಣ ಹುಡುಗರಿದ್ದಾಗಲೇ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆ ನೋಡಿದ್ದೇನೆ. ದೇಶದಲ್ಲಿ ಅವರದ್ದೇ ಸರ್ಕಾರ ಇದೆ. ಒಂದಾದರೂ ಎಫ್ಐಆರ್ ನನ್ನ ವಿರುದ್ಧ ತೋರಿಸಲಿ, ನಾನು ರಾಜಕೀಯ ಬಿಡ್ತೀನಿ. ಇಲ್ಲ ಅವರ ಮೇಲೆ ಎಫ್ಐಆರ್ ಎಷ್ಟಿದೆ ಎಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಸಿ.ಟಿ ರವಿ ಎಷ್ಟು ಸಂಪಾದನೆ ಮಾಡಿದ್ದಾರೆ. ದನದ ಮಾಂಸ ಮಾರಾಟಗಾರರಿಂದ ಎಷ್ಟು ಹಫ್ತಾ ವಸೂಲಿ ಮಾಡಿದ್ದಾರೆ, ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ, ಎಲ್ಲವೂ ಬಹಿರಂಗವಾಗಬೇಕು ಎಂದು ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ರು. ಇಷ್ಟೊಂದು ಹಣ ಶಾಸಕರಿಗೆ ಮಾಡೋದಕ್ಕೆ ಸಾಧ್ಯ ಇಲ್ಲ. ನನ್ನ ಸಂಪಾದನೆ ಹಾಗೂ ಅವರ ಸಂಪಾದನೆ ಬಗ್ಗೆ ತನಿಖೆ ಆಗಲಿ. ಐಟಿ, ಇಡಿ, ದಾಳಿ ನಡೆಯಲಿ ಎಂದು ಬಹಿರಂಗ ಚರ್ಚೆಗೆ ಬಿ ಕೆ ಹರಿಪ್ರಸಾದ್ ಆಹ್ವಾನ ಕೊಟ್ಟಿದ್ದಾರೆ.
ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿ ಟಿ ರವಿ, ಪ್ರತೀ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೀನಿ. ಲೋಕಾಯುಕ್ತ ರದ್ದು ಮಾಡಿದೋರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಮಧ್ಯಮ ವರ್ಗದ ರೈತನ ಮಗ. ರಾಜಕೀಯಕ್ಕೆ ಬರೋದಕ್ಕೂ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೀನಿ. ಅನುಮಾನ ಇರೋರು ಲೋಕಾಯುಕ್ತಕ್ಕೆ ಹೋಗಲಿ ಎಂದರು. ನಾನು ಬೇನಾಮಿ ಆಸ್ತಿ ಮಾಡೋದಕ್ಕೆ, ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ಒಂದ್ಕಡೆ ಆಲೂ ಹಾಕಿ ಮತ್ತೊಂದು ಕಡೆ ಚಿನ್ನ ತೆಗೆಯೋರು ಅವ್ರು. ಅಕ್ರಮ ಆಸ್ತಿ ಇರೋದು ಧೃಢಪಡಿಸಲಿ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಅಲ್ಲ. ಗ್ಯಾಂಗ್ ಕಟ್ಟಿಕೊಂಡು ಓಡಾಡಿಲ್ಲ ಅಂತಾ ಬಿ. ಕೆ ಹರಿಪ್ರಸಾದ್ ಗೆ ಸಿ ಟಿ ರವಿ ( C.T RAVI ) ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : – ಜನಾರ್ದನ್ ರೆಡ್ಡಿ ಪಕ್ಷದಿಂದ ನಮಗೇನೂ ಹಾನಿಯಿಲ್ಲ – ಸಿಎಂ ಇಬ್ರಾಹಿಂ