ನಾನು ಸ್ವಲ್ಪ ಸುಸ್ತಾಗಿದ್ದೇನೆ ವೈದ್ಯರು ಬಂದು ಚೆಕ್ ಮಾಡಿದರು. ತಾಪಮಾನ ನೂರಾಗಿದೆ ರೆಸ್ಟ್ ಇಲ್ಲದೆ ಸುತ್ತುತ್ತಿದ್ದೇನೆ.ವಿಧಾನಸಭೆಗೂ ಹೋಗಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (Dk shivkumar) ಹೇಳಿದ್ದಾರೆ. ಕರಪ್ಸನ್ ಕ್ಯಾಪಿಟಲ್ ಆಫ್ ಇಂಡಿಯಾ ಕರ್ನಾಟಕ ಆಗಿದೆ.
ರಾಹುಲ್ ಗಾಂಧಿ (Rahul gandhi) ನನ್ನ ಬಳಿ ವಿಚಾರಿಸಿದರು ಕಾರಿನಲ್ಲಿ ಹೋಗುವಾಗ ನನ್ನ ಬಳಿ ಕೇಳಿದರು. ನಾನು ಜೈಲಿಗೆ ಹೋಗಲು ಹೆದರುವುದಿಲ್ಲ ನನ್ನ ತಾತ ಸಹಾ ಜೈಲಿನಲ್ಲಿದ್ದರು. ನನ್ನ ಜೊತೆ ರಾಹುಲ್ ಗಾಂಧಿ ಚರ್ಚೆ ಮಾಡಿದರು. ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ಎಲ್ಲಿ ಬಲಿಷ್ಠರಾಗಿ ಬಿಡುತ್ತಾರೆ ನಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಅಂತಾ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತ್ ಜೋಡೋದಲ್ಲಿ ಹೆಚ್ಚು ಮಹಿಳೆಯರು ಭಾಗಿಯಾಗಿ. ಮಹಿಳಾ ನಾಯಕಿಯೊಬ್ಬರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅದು ಯಾರು ಅಂತಾ ನಾನು ಘೋಷಣೆ ಮಾಡಲ್ಲ. ಯಾರಿಗೂ ನಾನು ನಿದ್ದೆ ಮಾಡಲು ಬಿಡುವುದಿಲ್ಲ. ಪ್ರತಿಯೊಬ್ಬರು ಕೆಲವು ದಿನ ಕಷ್ಟಪಡಿ. ದಾವಣಗೆರೆ (Davangere) ಗೆ ಹಿಂದಿನ ದಿನ ರಾತ್ರಿ ಹೊರಟಿದ್ದೀರಿ ಅಲ್ವಾ ? ಅದೇ ರೀತಿ ಇಲ್ಲಿಗೂ ಬನ್ನಿ. ಮುಖ ತೋರಿಸಿ ತಿಂಡಿ ತಿಂದುಕೊಂಡು ಹೋಗುವುದಲ್ಲ . ಕೊನೆಯವರೆಗೂ ಎಲ್ಲರೂ ಇರಬೇಕು. ಯಾರು ಬಂದರೂ ಯಾರ ಬರಲಿಲ್ಲ ಎಲ್ಲಾ ಲೆಕ್ಕಾ ಹಾಕಿಸುತ್ತೇನೆ.ಎಲ್ಲದಕ್ಕೂ ಒಂದೊಂದು ಕಮಿಟಿ ಮಾಡಲಾಗಿದೆ. ಈ ಜಿಲ್ಲೆಯವರು 10 ರಿಂದ 15 ಸಾವಿರ ಜನ ಕರೆದುಕೊಂಡು ಬರಬೇಕು. ಒಬ್ಬೊಬ್ಬ ನಾಯಕ ನೂರು ಜನರನ್ನು ಕರೆದುಕೊಂಡು ಬನ್ನಿ. ವಾಹನವನ್ನು ನಾಯಕರು ಕೊಡುತ್ತಾರೆ. ಇದನ್ನೂ ಓದಿ : – ವಿಮ್ಸ್ ಘಟನೆ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ – ಡಾ ಸುಧಾಕರ್
ನೀವು ಬರಲಿಲ್ಲ ಅಂದರೆ ಸಿದ್ದರಾಮಯ್ಯ (Siddaramaiah) ಮರ್ಯಾದೆ ಹೋಗುತ್ತದೆ. ನನ್ನ ಮರ್ಯಾದೆ ಹೋಗುತ್ತದೆ ನಿಮ್ಮ ಮರ್ಯಾದೆ ಹೋಗುತ್ತದೆ. ಟಿ ಶರ್ಟ್ ಮಾಡಿಸಿದರೆ ನನ್ನ ಸಿದ್ದರಾಮಯ್ಯ ಪೋಟೋ ಬೇಡ. ನಿಮ್ಮದು ರಾಹುಲ್ ಗಾಂಧಿ ಪೋಟೋ ಹಾಕಿಸಿ ಹಂಚಿ. ಎಲ್ಲಾ ಅಧಿಕಾರ ಬೇಕು ಅಂತಾ ಅಲ್ಲ. ಪರ್ಫಾಮ್ ಮಾಡಿಲ್ಲ ಅಂದರೆ ಬೇರೆಯವರನ್ನು ರೆಡಿ ಮಾಡಿ. ನಾನು ಸಿದ್ದರಾಮಯ್ಯ ನಿಮ್ಮನ್ನು ನಂಬಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದ್ರು.
ಇದನ್ನೂ ಓದಿ : – ಮೈಸೂರಿನಲ್ಲಿ ಸಾಹಸಸಿಂಹ ದಿ. ವಿಷ್ಣು ವರ್ಧನ್ ಹುಟ್ಟುಹಬ್ಬದ ಸಂಭ್ರಮ