ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ನಂತರ ಅಪಹರಿಸಿದ ಖದೀಮ ತನ್ನ ಅಣ್ಣ ಹಾಗೂ ಚಿಕ್ಕಮ್ಮನ ನೆರವಿನಿಂದ ಅಕ್ರಮವಾಗಿ ಬಂಧನದಲ್ಲಿರಿಸಿದ್ದ. ಬಳಿಕ ಅತ್ಯಾಚಾರವೆಸಗಿ ಬಾಲಕಿಯ ಮೈಮೇಲಿದ್ದ ಚಿನ್ನಾಭರಣ ಕಸಿದು ನಂತರ ಬಾಲಮಂದಿರದ ವಶಕ್ಕೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಹೆಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದ ಅರುಣ ಕೃತ್ಯವೆಸಗಿ ಪರಾರಿಯಾದ ಆರೋಪಿ. ಈತನ ಕೃತ್ಯಕ್ಕೆ ಸಹಕರಿಸಿದ ಅಣ್ಣ ಅಭಿ ಹಾಗೂ ಚಿಕ್ಕಮ್ಮ ಸಹ ಪರಾರಿಯಾಗಿದ್ದಾರೆ.
ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯನ್ನ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡ ಅರುಣ ಪ್ರೀತಿಸುವ ನಾಟಕವಾಡಿದ್ದ.ಬಾಲಕಿಗೆ ಮತ್ತೊಂದು ಹುಡುಗನ ಜೊತೆ ಮದುವೆಗೆ ನಿಶ್ಚಯವಾಗಿತ್ತು.ಈ ಮಾಹಿತಿ ಅರಿತ ಅರುಣ ತನ್ನ ಅಣ್ಣ ಅಭಿ ಜೊತೆ ನಂಜನಗೂಡು ಟೌನ್ ನಲ್ಲಿ ದೊಡ್ಡಪ್ಪನ ಮನೆಯಲ್ಲಿ ವಾಸವಿದ್ದ ಬಾಲಕಿಯ ಮನೆಗೆ ಬಂದು ಬಲವಂತವಾಗಿ ಕರೆದೊಯ್ದು ಮೈಸೂರಿನ ಕುಂಬಾರಕೊಪ್ಪಲಿನಲ್ಲಿದ್ದ ಚಿಕ್ಕಮ್ಮ ಅಶ್ವಿನಿ ಮನೆಯಲ್ಲಿ ಮೂರು ದಿನಗಳ ಅಕ್ರಮವಾಗಿ ಬಂಧಿಸಿದ್ದ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ. ಅರುಣನ ಒತ್ತಾಯಕ್ಕೆ ಮಣಿಯದಿದ್ದಾಗ ಅತ್ಯಾಚಾರ ಮಾಡಿದ್ದ. ಕೃತ್ಯವೆಸಗಿದ ನಂತರ ಆಕೆಯ ಮೈಮೇಲಿದ್ದ ಚಿನ್ನದ ಒಡವೆಗಳನ್ನ ಕಿತ್ತುಕೊಂಡು ಬಾಲಮಂದಿರದ ವಶಕ್ಕೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ನಂತರ ಬಾಲಕಿ ಬಾಲಮಂದಿರದಿಂದ ಅಜ್ಜಿಯ ಮನೆ ಸೇರಿಕೊಂಡಿದ್ದಾಳೆ.ಬಲವಂತವಾಗಿ ಕರೆದೊಯ್ದು ಅತ್ಯಾಚಾರವೆಸಗಿ ಚಿನ್ನಾಭರಣ ಕಿತ್ತುಕೊಂಡು ಹೋದ ಅರುಣ ಹಾಗೂ ಸಹಕರಿಸಿದ ಅಭಿ ಮತ್ತು ಅಶ್ವಿನಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂತ್ರಸ್ಥ ಬಾಲಕಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ…
ಇದನ್ನೂ ಓದಿ :- ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲುವು ನಿಶ್ಚಯ – ಬಾಲಚಂದ್ರ ಜಾರಕಿಹೊಳಿ