ಬೆಂಗಳೂರು: ಇನ್ನು ಪಂಚ ರಾಜ್ಯ ಚುನಾವಣೆ ಹತ್ರ ಬರುತ್ತಿದ್ದ ಹಾಗೇ ಕಾಂಗ್ರೆಸ್ ಚಟುವಟಿಕೆಗಳು ಗರಿಗೆದರಿವೆ. ಪಂಚ ರಾಜ್ಯಗಳಿಗೆ ಹಣ ಕಳಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ ಎಂದು ಶಾಸಕ ಬಿ ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಷ್ಟು ಸಾವಿರ ಕೋಟಿ ಕಳಿಸ್ತಿದಾರೆ ಹೊರ ರಾಜ್ಯಗಳಿಗೆ ಅಂತ ಯಾರಿಗೂ ಅಂದಾಜು ಸಿಕ್ತಿಲ್ಲ.ಒಳ್ಳೆ ಆಡಳಿತ ಕೊಡ್ತೀವಿ ಅಂತ ಹಗಲು ದರೋಡೆಯಲ್ಲಿ ಸರ್ಕಾರ ಮುಳುಗಿದೆ. ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್ ಕೇಳುವ ಮಟ್ಟಕ್ಕೆ ಇವರು ಇಳಿದಿದ್ದಾರೆ. ಕಮೀಷನ್ ತಳಮಟ್ಟದ ಅಧಿಕಾರಿಗಳವರೆಗೂ ಮುಟ್ಟಿದೆ.
ಇದು ಎಟಿಎಂ ಸರ್ಕಾರ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನವ್ರು ಲೂಟಿಗೆ ಮೇನ್ ಬ್ಯಾಂಕ್ ತೆರೆದಿದ್ದಾರೆ.’ಶಿವಕುಮಾರ್ ಬ್ಯಾಂಕ್ ಇಂಡಿಯಾ’ ತೆರೆದಿದ್ದಾರೆ. ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳಿಸ್ತಿರೋದು ಸ್ಪಷ್ಟ ಆಗಿದೆ ಎಂದು ಹೇಳಿದ್ದಾರೆ.