ಬೆಳಗಾವಿ:ಗೋಕಾಕ ತಾಲೂಕಾ ಆಡಳಿತ ಸೌದಕ್ಕೆ ಎಂಟ್ರಿ ಆದರೆ ಸಾಕು ಗುಟ್ಕಾ ತಿಂದು ಉಗುಳಿದ ಗೋಡೆಗಳು,ಗುಡ್ಡೆ ಹಾಕಿರುವ ಕಸದ ರಾಶಿಗಳು ತಮ್ಮನ್ನು ಸ್ವಾಗತಿಸುತ್ತವೆ.
ಹೌದು ಕರದಂಟು ನಾಡೆಂದೆ ಹೆಸರು ವಾಸಿಯಾದ ಗೋಕಾಕದ ತಾಲೂಕಾ ಅಡಳಿತ ಸೌದ ಗೋಕಾಕನಲ್ಲಿ ದಿನಾಲು ಕಂಡು ಬರುವ ದೃಶ್ಯಗಳು.ಇಲ್ಲಿ ಕಾಲಿಟ್ಟರೆ ಸಾಕು ಎಲ್ಲೆಂದರಲ್ಲಿ ಉಗುಳಿದ ಕಲೆಗಳು ಕಾಣುತ್ತವೆ. ಸಾರ್ವಜನಿಕರು ಕಟ್ಟಡದ ಗೋಡೆಗಳನ್ನೆ ಉಗುಳುವ ಸ್ಥಳವನ್ನಾಗಿ ಮಾಡಿಕೊಂಡಿದ್ದರಿಂದ ಗಬ್ಬು ನಾರುತ್ತಿದೆ.ತಾಲೂಕಾ ಆಡಳಿತ ಸೌಧದಲ್ಲಿ ಕಂದಾಯ ನೋಂದಣಿ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು,ಪಡಸಾಲೆ ಸೇರಿ10ಕ್ಕೂ ಅಧಿಕಕಾರ್ಯಾಲಯಗಳಿವೆ. ಇಲ್ಲಿಗೆ ನಿತ್ಯವೂ ನೂರಾರು ಜನ ಭೇಟಿ ನೀಡುತ್ತಾರೆ.
ಇತರರಿಗೆ ಸ್ವಚ್ಛ ಭಾರತ ಅಭಿಯಾನ ನೀತಿ ಪಾಠ ಹೇಳುವ ಅಧಿಕಾರಿಗಳು ತಮ್ಮ ಕಟ್ಟಡದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ನಿಷ್ಕಾಳಜಿ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪುರುಷ ಶೌಚಾಲಯದಲ್ಲಿ ಮೂತ್ರ ತುಂಬಿದ ಬಾಟಲಿಗಳು. ಗುಟಖಾ ಪೌಚಗಳು ತುಂಬಿವೆ. ಬಾಗಿಲು ತೆರೆದರೆ ಸಾಕು ಸುತ್ತಲೂ ಗಬ್ಬು ವಾಸನೆ ಬರುತ್ತದೆ,ಇಷ್ಟೆಲ್ಲಾ ಆದರೂ ಮಹಿಳೆಯರ ಕಷ್ಟವಂತೂ ಹೇಳತೀರದು.ತಹಸೀಲ್ದಾರರು
ಕ್ರಮ ಕೈಗೊಂಡು ಸಮಸ್ಯೆಗಳಿಗೆ ಮುಕ್ತಿ ಹಾಡಬೇಕಿದೆ.