ಚಿಕ್ಕಬಳ್ಳಾಪುರ : ನನಗೆ ಅಯೋಧ್ಯೆ ಕಾರ್ಯಕ್ರಮ ಕ್ಕೆ ಆಹ್ವಾನ ಬಂದಿದೆ ಆದರೆ, ನಾನು ಅಯೋಧ್ಯೆಗೆ ಹೋಗುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳಿದ್ದಾರೆ.
ನನಗೆ ಆ ದಿನ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದುದರಿಂದ ನಾನು ಹೋಗುತ್ತಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಅಯೋಧ್ಯೆ ಕಾರ್ಯಕ್ರಮ ನಿಗದಿಯಾಗಿದ್ದು, ಆದರೆ ನನಗೆ 8 ತಿಂಗಳ ಹಿಂದೆಯೇ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು.
ಆದ್ಯಾತ್ಮಕತೆ ಸರಿಯಾದ ಹಾದಿಯಲ್ಲಿದೆ ನಡೆದು ಬಂದಿದೆ . ಆದರೆ ಆದ್ಯಾತ್ಮಕತೆಯನ್ನು ಸರಿ ಮಾರ್ಗದಲ್ಲಿ ಅನುಸರಿಸುತಿಲ್ಲ . ಆದ್ಯಾತ್ಮಕತೆ ಕುರಿತು ಸದ್ಗುರು ಜಗ್ಗಿ ವಾಸುದೇವ್ ಹೇಳಿಕೆ ನೀಡಿದ್ದಾರೆ. ಕೆಲವರು ತಮ್ಮ ಸ್ವಾರ್ತಕ್ಕಾಗಿ ಆದ್ಯಾತ್ಮಿಕತೆ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು ಆದ್ಯಾತ್ಮಕತೆಯ ದಾರಿ ತಪ್ಪಿಸುತಿದ್ದಾರೆ. ಇತ್ತೀಚೆಗೆ ಆದ್ಯಾತ್ಮಕತೆಗೆ ಒಂದು ರೂಪ ಬರುತ್ತಿದೆ ಎಂದು ಹೇಳಿದ್ದಾರೆ.