ಬೆಂಗಳೂರು: ಪೀಣ್ಯ ಫ್ಲೈಓವರ್ ಸಮಸ್ಯೆಯಿಂದ ತುಂಬಾ ದಿನಗಳಿಂದ ಭಾರೀ ವಾಹನಗಳ ಸಂಚಾರ ನಿಷೇಧ ಹೇರಲಾಗಿದೆ. ಇದರಿಂದಾಗಿ ಜನರಿಗೆ ಟ್ರಾಫಿಕ್ ಕಿರಿ ಕಿರಿ ಉಂಟಾಗಿತ್ತು.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಮೇಲ್ಸೇತುವೆ ಸದೃಢತೆಗೆ ಕೇಬಲ್ಗಳ ಅಳವಡಿಕೆಗೆ ಐಐಎಸ್ಸಿ ತಜ್ಞರು ಸೂಚಿಸಿದ್ರು. ಆದರ ಮೇರಿಗೆ ಮಧ್ಯಪ್ರದೇಶದ ಭೂಪಾಲ್ನಿಂದ 25 ಟನ್ ಕೇಬಲ್ ತರಿಸಿ ಕೆಮಿಕಲ್ ಅನಾಲಿಸಿಸ್ ಮಾಡಿ ಸಧ್ಯ 120 ಕಂಬಗಳಿಗೆ ಅರ್ಧದಷ್ಡು ಕೇಬಲ್ ಅಳವಡಿಕೆ ಮಾಡಲಾಗಿದೆ.
ಪೀಣ್ಯ ಫ್ಲೈಓವರ್ ನಲ್ಲಿ ಸಧ್ಯದಲ್ಲೆ ಲಾರಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಸಧ್ಯ ಫ್ಲೈಓವರ್ನ ಎಲ್ಲಾ ಪಿಲ್ಲರ್ಗಳಿಗೆ ಈಗಾಗಲೇ 240 ಕೇಬಲ್ಗಳನ್ನ ಅಳವಡಿಕೆ ಮಾಡುತ್ತಿದ್ದು, ಎರಡು ವರ್ಷಗಳಿಂದ ಪರದಾಡುತ್ತಿದ್ದ ವಾಹನ ಸವಾರರಿಗೆ ಇನ್ಮುಂದೆ ಚಾಲನೆ ಸುಗುಮವಾಗಿ ಸಾಗಲಿದೆ.