State News

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕಾರದ ಮಠದ ಸ್ವಾಮಿಜಿಗೆ ಆಹ್ವಾನ

ತುಮಕೂರು : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ತುಮಕೂರು ತಾಲೂಕಿನ ಬೆಳ್ಳಾವಿಯ
ಕಾರದ ಮಠದ ಶ್ರೀ ವೀರ ಬಸವ ಸ್ವಾಮಿಜಿಗೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನ ಕಾರ್ಯದರ್ಶಿಯಿಂದ ಆಹ್ವಾನ ಬಂದಿದೆ.

ನಂತರ ಮಾಧ್ಯಮದೊಂದಿಗೆ ಮಾತನಾಡಿದ, ಕಾರದ ಮಠದ ಶ್ರೀಗಳ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ, ನಾನು ಹೋಗ್ತೇನೆ. ಜನವರಿ 20ರಂದು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ. ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿರೋದು ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಶ್ರೀಗಳು ಹೇಳಿದರು.

ಅಂದಿನ ದಿನಮಾನಗಳಲ್ಲಿ ಶ್ರೀರಾಮನ ವಿಚಾರಗಳನ್ನ ಕೇಳಿದ್ದೇವೆ. ಆದರೆ, ಇಂದಿನ ದಿನಮಾನಗಳಲ್ಲಿ ಮನೆ- ಮನೆಗಳಲ್ಲೂ ಶ್ರೀ ರಾಮನ ಮಂತ್ರ ಪಠಣೆ ಆಗ್ತಿದೆ. ಶ್ರೀರಾಮ ಭಾರತದ ಭೂಮಿಯನ್ನು ಪವಿತ್ರ ಮಾಡಿದ ಒಂದೆರಡು ಕಥೆಗಳನ್ನು ನಾವು ಕೇಳಿದ್ದೇವೆ. ಶ್ರೀರಾಮ ಹೇಳ್ತಾನೆ, ತಮ್ಮ ಲಕ್ಷ್ಮಣ ಬಂಗಾರದ ಬಗ್ಗೆ ಚಿಂತೆ ಬೇಡ ಎಂದರು. ನಮ್ಮ ಮಣ್ಣಿನ ಬಗ್ಗೆ ಯೋಚನೆ ಮಾಡಬೇಕು. ನಾವು ಏನೇ ಆದ್ರೂ ಭರತ ಭೂಮಿಯಲ್ಲೇ ಬದುಕಬೇಕು, ಬಾಳಬೇಕು. ಶ್ರೀ ರಾಮನ ಆದರ್ಶಗಳು ನಮಗೆ ದಾರಿದೀಪವಾಗಬೇಕು.

ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆ ಮಾಡುತ್ತಿರುವುದನ್ನು ಕೆಲವರು ವಿರೋಧಿಸುತ್ತಾರೆ. ಈ ರೀತಿಯ ವಿರೋಧ ಮಾಡೋದು ಸರಿಯಲ್ಲ. ರಾಮ ಮಂದಿರ ಉದ್ಘಾಟನೆಯಿಂದ ಯಾವುದೋ ಒಂದು ಪಕ್ಷ ಲಾಭ ಪಡೆಯುತ್ತದೆ ಅನ್ನೋದು ನಾನು ಒಪ್ಪಲ್ಲ. ನಮ್ಮೂರಿನ ದೇವಸ್ಥಾನ, ಮಠದ ಉದ್ಘಾಟನೆಗೆ ರಾಜಕಾರಣಿಗಳನ್ನು ಕರೆಯುತ್ತೇವೆ. ಹಾಗಂತ ಅವರು ಅದರ ಲಾಭ ಪಡೆಯುತ್ತಾರೆ ಎಂದು ಅರ್ಥ ಅಲ್ಲ. ನಾವು ಆ ರಾಜಕಾರಣಿಗಳಿಗೆ ಗೌರವ ಕೊಟ್ಟು ಆಹ್ವಾನ‌ ನೀಡುತ್ತೇವೆ ಅಷ್ಟೇ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!